ಮಳೆಗಾಗಿ ಶೇಡಬಾಳದಲ್ಲಿ ಕತ್ತೆಗಳ ಮದುವೆ
Donkeys' wedding in Shedbal for rain
ಕಾಗವಾಡ 29: ತಾಲೂಕಿನಲ್ಲಿ ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದ್ದು, ಅನ್ನದಾತ ರೈತರು ಕಂಗಾಲಾಗಿದ್ದಾರೆ. ಕೂಡಲೇ ಮಳೆ ಪ್ರಾರಂಭವಾಗಿ ಬೆಳೆಗಳು ಚೆನ್ನಾಗಿ ಬೆಳೆಯಲಿ ಎಂದು ಶೇಡಬಾಳ ಪಟ್ಟಣದ ರೈತರು ಸೇರಿ ಸೋಮವಾರ ದಿ. 29 ರಂದು ಕತ್ತೆಗಳ ಮದುವೆ ಮಾಡಿ, ಮಳೆರಾಯನಿಗೆ ಪ್ರಾರ್ಥನೆ ಮಾಡಿದ್ದಾರೆ. ಈ ವೇಳೆ ಶೇಡಬಾಳ ಪಟ್ಟಣದ ರೈತರಾದ ವಿನೋದ್ ಪಾಟೀಲ್, ವರ್ಧಮಾನ್ ಪಾಟೀಲ್, ಸುನೀಲ್ ಪಾಟೀಲ್, ಅಶ್ವತ್ ಪಾಟೀಲ್, ಸದಾಶಿವ ನಿಕಮ್, ಪ್ರಕಾಶ್ ಇರಾಜ್, ಅಣ್ಣಾಸಾಬ್ ಗಾಯಕವಾಡ, ಶಿವಾಜಿ ನರಸಾಯಿ, ದೀಪಕ್ ಪೂಜಾರಿ, ಅಪ್ಪು ಗುರವ, ಅಜಿತ್ ಜಾಧವ್, ವಿನೋದ ಸವದಿ, ಧನಪಾಲ್ ಶಿರಗಾವೆ, ಅಪ್ಪು ನರವಾಡೆ, ಶ್ರೀಕಾಂತ್ ಪೂಜಾರಿ, ಉಮೇಶ ಶಿಂಧೆ, ಮಹಾದೇವ ಚಿಂಚಲೆ, ಚನ್ನಪ್ಪ ಮಾಳಿ, ಶಂಭು ಕಾವೇರಿ, ಮಾರುತಿ ಶಿಂಧೆ ಸೇರಿದಂತೆ ಗ್ರಾಮಸ್ಥರು, ರೈತರು ಉಪಸ್ಥಿತರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 