ರಂಗಪ್ಪಜ್ಜನ ಮಠದಲ್ಲಿ ಸಾಧು ಸಂತರಿಗೆ ವಸ್ತ್ರಗಳ ವಿತರಣೆ

ರಂಗಪ್ಪಜ್ಜನ ಮಠದಲ್ಲಿ ಸಾಧು ಸಂತರಿಗೆ ವಸ್ತ್ರಗಳ ವಿತರಣೆ Distribution of clothes to saints at Rangappajjana Math

ಬೆಟಗೇರಿ 29 : ಪೂಜ್ಯ ರಂಗಪ್ಪಜ್ಜನ ಮಠದಲ್ಲಿ ನಿನ್ನೆ ಜರುಗಿದ 97ನೇ ಜೋಡು ರಥೋತ್ಸವದಲ್ಲಿ ಕಳೆದ ಒಂದು ವಾರದಿಂದ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಎಲ್ಲ ಸಾಧು ಸಂತರಿಗೆ ಇಂದು ಮಧ್ಯಾಹ್ನ ಶ್ರೀ ರಂಗಾವಧೂತರ ಜೀರ್ಣೋದ್ದಾರ ಸೇವಾ ಸಮಿತಿಯಿಂದ ವಸ್ತ್ರಗಳು ಹಾಗೂ ಕಾಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗಣೇಶಸಿಂಗ್ ಬ್ಯಾಳಿ, ಅಮರೇಶ ಚ್ಯಾಗಿ, ನಿಂಗಪ್ಪ ಚೇಗೂರ, ಮೈಲಾರೆಪ್ಪ ಅರಣಿ, ವಿಜಯ ಕಬಾಡಿ, ಭೋಜಪ್ಪ ಹೆಗ್ಗಡಿ, ರುದ್ರ​‍್ಪ ಬಾದರದಿನ್ನಿ, ರಂಗಪ್ಪ ದ್ಯಾವಣಸಿ, ರಾಜು ಕಟಗಿ, ದುರ್ಗಾಸಿಂಗ್ ಕಾಟೇವಾಲ, ಅಶೋಕ ಮುಳಗುಂದ, ಮಹದೇವಸಾ ಮೇರವಾಡೆ, ಅಶೋಕ ಮುಳಗುಂದ, ಮಲ್ಲೇಶಪ್ಪ ಐಲಿ, ಗದಗ ಬೆಟಗೇರಿ ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.