ನೇಮಕಾತಿ ಆದೇಶ ಪತ್ರ ಸಚಿವ ಶ್ರೀಮಂತ ವಿತರಣೆ

ಶೇಡಬಾಳ 06: ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕೆಪಿಎಸ್‌ಸಿ ಯಿಂದ ನೇರ ನೇಮಕಾತಿ ಹೊಂದಿದ ಸುಮಾರು 254 ನೂತನ ಅಧಿಕಾರಿಗಳಿಗೆ  ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಶ್ರೀಮಂತ ಪಾಟೀಲ ಅವರು ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿದರು. 

ರಾಜ್ಯದಲ್ಲಿ ಕೋವಿಡ್‌ನಿಂದ 3 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಆದೇಶ ಪತ್ರಗಳನ್ನು ಸಚಿವ ಶ್ರೀಮಂತ ಪಾಟೀಲರು 254 ನೂತನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಸಚಿವರಿಂದ ಆದೇಶ ಪತ್ರಗಳನ್ನು ಪಡೆದುಕೊಂಡ ಖುಷಿಯಲ್ಲಿದ್ದ ನೂತನ ಅಧಿಕಾರಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಮೆಹಬೂಬ್ ಸಾಬ್, ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಗೋಪಾಲ್ ಲಮಾಣಿ, ಕೆಎಂಎಫ್ ನಿರ್ದೇಶಕರಾದ ಅಪ್ಪಾಸಾಬ ಅವತಾಡೆ, ನಾಗರಾಜ್, ಹಿರಿಯ ಮುಖಂಡರಾದ ದಾದಾಗೌಡ ಪಾಟೀಲ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಹಲವು ಜಿಲ್ಲೆಯ ಜಿಲ್ಲಾಧಿಕಾರಿಗಳು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.