ಕಾರ್ತಿಕ್ ಶಿಗ್ಲಿಮಠ್ ನೇತೃತ್ವದಲ್ಲಿ 222 ಸಸಿಗಳ ವಿತರಣೆ

ಕಾರ್ತಿಕ್ ಶಿಗ್ಲಿಮಠ್ ನೇತೃತ್ವದಲ್ಲಿ 222 ಸಸಿಗಳ ವಿತರಣೆ Distribution of 222 saplings under the leadership of Karthik Shiglimath

ಗದಗ 11 : ಇಂದು ನಾವು ನೆಡುವ ಸಸಿಗಳು ಮುಂದಿನ ಪೀಳಿಗೆಗೆ ನೀಡುವ ಅಮೂಲ್ಯ ಕೊಡುಗೆಯಾಗಿದೆ. ಹಸಿರು ಪರಿಸರವೇ ಆರೋಗ್ಯಕರ ಸಮಾಜದ ಅಡಿಪಾಯ ಎಂದು ಯುವ ನಾಯಕ ಹಾಗೂ ಉದ್ಯಮಿ ಕಾರ್ತಿಕ್ ಶಿಗ್ಲಿಮಠ್ ಹೇಳಿದರು.ನಗರದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಹಾಗೂ ಪ್ರಧಾನಿ ನರೇಂದ್ರ ಮೋದಿ “ಏಕ್ ಪೇಡ್ ಮಾಂ ಕೆ ನಾಮ್‌” ಅಭಿಯಾನಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಸಸಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪರಿಸರ ಸಂರಕ್ಷಣೆ ಇಂದಿನ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಸಸಿಯನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ಕಳೆದ ವರ್ಷ 111 ಸಸಿಗಳನ್ನು ವಿತರಿಸಲಾಗಿದ್ದು, ಈ ಬಾರಿ 222 ಸಸಿಗಳನ್ನು ವಿತರಿಸುವ ಮೂಲಕ ಹಸಿರು ಅಭಿಯಾನವನ್ನು ಇನ್ನಷ್ಟು ವಿಸ್ತರಿಸಲಾಗಿದೆ ಎಂದು ಹೇಳಿದರು.ಉದ್ಯಮಿ ಸನ್ಮಿತ್ ಶಾ ಮಾತನಾಡಿ, ಪರಿಸರ ಉಳಿವಿನಂತಹ ಕಾರ್ಯಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ. ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ ಎಂದು ಹೇಳಿದರು.ಈಶ್ವರ ಕರ್ಮುಡಿ, ಸಂದೇಶ್ ಗಾಯಕವಾಡ, ಅಮಿತ್ ಗಾಯಕವಾಡ, ಫಕೀರಡ್ಡಿ ಪೂಜಾರ, ಯುವಕರು ಇದ್ದರು.