ಬಕ್ರೀದ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಗಣ್ಯರಿಗೆ ಸನ್ಮಾನ

Dignitaries honored for participating in mass prayers on the occasion of Bakrid festival

ಬಕ್ರೀದ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಗಣ್ಯರಿಗೆ ಸನ್ಮಾನ

ಕೊಪ್ಪಳ 08: ಮುಸ್ಲಿಂ ಸಮುದಾಯದ ಪವಿತ್ರ ತ್ಯಾಗ ಬಲಿದಾನದ ಪ್ರತೀಕ ಈದ್ ಉಲ್ ಅಧಾ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಗರದ ಹಳೆ ಈದ್ಗ ಮೈದಾನದಲ್ಲಿ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ, ಸಂಸದ ಕೆ ರಾಜಶೇಖರ್ ಹಿಟ್ನಾಳ್, ಮಾಜಿ ಸಂಸದ ಸಂಗಣ್ಣ ಕರಡಿ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಕಾಂಗ್ರೆಸ್ ಪಕ್ಷದ ನಾಯಕ ಅಮರೇಶ್ ಕರಡಿ ಸೇರಿದಂತೆ ಅನೇಕರಿಗೆ ಮುಸ್ಲಿಂ ಸಮುದಾಯದ ಪರವಾಗಿ ಅವರೆಲ್ಲರನ್ನು ಅಲ್ಲದೆ ಇತರ ಗಣ್ಯರನ್ನು ಈ ಶುಭ ಸಂದರ್ಭದಲ್ಲಿ ಸನ್ಮಾನಿಸಿ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.  ಈ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಖಾಜಿ ಅಬ್ಬಾಸ ಆಲಿ ಸೇರಿದಂತೆ ಸಮಾಜದ ನಾಯಕರದ ಕೆಎಂ ಸಯ್ಯದ್ ಎಂ ಪಾಷಾ ಕಾಟನ್ ಮತ್ತಿತರರು ಸಹಪಾಲ್ಗೊಂಡಿದ್ದರು.