ಕೆ ಆರ್ ಎಚ್ ಶಿಕ್ಷಣ ಸಂಸ್ಥೆ ಘಟಪ್ರಭಾದಲ್ಲಿ ಗಣ್ಯರ ಸನ್ಮಾನ

ಕೆ ಆರ್ ಎಚ್ ಶಿಕ್ಷಣ ಸಂಸ್ಥೆ ಘಟಪ್ರಭಾದಲ್ಲಿ ಗಣ್ಯರ ಸನ್ಮಾನ Dignitaries felicitated at KRH Educational Institute Ghataprabha

ಘಟಪ್ರಭಾ 08:   ಪ್ರತಿಷ್ಠಿತ  ಶ್ರೀ ಕೆ ಆರ್ ಎಚ್ ಶಿಕ್ಷಣ ಸಂಸ್ಥೆಯಎಸ್ ಎಸ್ ಎಲ್ ಸಿ 2003ನೇ ವರ್ಷದ ತಂಡದ ವಿದ್ಯಾರ್ಥಿಗಳ ಪುನರ್ಮಿಲನ ಮತ್ತು ಗುರು ವಂದನಾ ಕಾರ್ಯಕ್ರಮ ರವಿವಾರದಿನಾಂಕ 05-03-2026 ರಂದು ವೈಭವದಿಂದ ನಡೆಯಿತು.ಸಂಸ್ಥೆಯ ಅಧ್ಯಕ್ಷರಾದ  ರಾಮಣ್ಣ ಹುಕ್ಕೇರಿ ಹುಕ್ಕೇರಿ ಹಿರಿಯಮುಖಂಡರಾದ  ಸುರೇಶ್ ಪಾಟೀಲ ಮತ್ತು ಮಧುಕರ ದೇಶಪಾಂಡೆ ಇನಾಮದಾರ ಸರಕಾರಿ ಪ್ರೌಢ ಶಾಲೆ ಮಲ್ಲಾಪುರ ಪಿ ಜಿ ಘಟಪ್ರಭಾದ ಎಸ್ ಡಿ ಎಂ ಸಿ ಯ ಅಜೀವ ಗೌರವ ಕಾರ್ಯದರ್ಶಿಗಳಾಗಿರುವ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ  ಹಾಗೂ ತಮಗೆ ಕಲಿಸಿದ ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿಗಳನ್ನು ಸತ್ಕಾರ ಮಾಡಲಾಯಿತು.ಜಯದೇವ ದೇಶಪಾಂಡೆ, ಗುರುರಾಜ ಕುಲಕರ್ಣಿ,ಮುತ್ತುರಾಜ ದೊಡಮನಿ, ರವಿ ಶ್ರೀಖಂಡೆ,ಸತೀಶ್ ಪಾಟೀಲ ಅನಂತ ಖಾಸನೀಸ್ ಅಮೃತಾ ಚಿಕ್ಕೋಡಿಕರ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಶೃಮ ವಹಿಸಿ ಯಶಸ್ವಿಗೊಳಿಸಿದರು.