ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮ

ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮ Deworming Day Program

ಲೋಕದರ್ಶನ ವರದಿ 

ಬೆಳಗಾವಿ, 10 : ಸ್ಥಳಿಯ ರುಕ್ಮಿಣಿ ನಗರ ಅಂಗನವಾಡಿ ಕೇಂದ್ರ ಸಂ. 124 ಹಾಗೂ 126ರಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದ ನಿಮಿತ್ಯ ಜಾಗೃತಿ ಹಾಗೂ ಮಾತ್ರೆ ನೀಡುವ ಕಾರ್ಯಕ್ರಮ ದಿ. 10ರಂದು ಜರುಗಿತು. 

ಅಂಗನವಾಡಿ ಮೇಲ್ವಿಚಾರಕಿ ಎಸ್ ವಾಯ್ ಗುಡಿ ಇವರು ಈ ಸಂದರ್ಭದಲ್ಲಿ ಮಾತನಾಡಿ ಜಂತು ಹುಳು ಉತ್ಪತಿ ಹಾಗೂ ಅವುಗಳ ನಿರ್ಮೂಲನೆ ಕುರಿತು ವಿವರಿಸಿದರು. 

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಜಂತುಹುಳುಗಳ ನಿವಾರಣಾ ಮಾತ್ರೆ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ ಬಿರ್ಜೆ, ರೇಣುಕಾ ಖಟಾವಕರ, ಆಶಾ ಕಾರ್ಯಕರ್ತೆ ನೇತ್ರಾ ಮೋದಗೆಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು. 


Belgavi