ದೇವೇಂದ್ರಗೌಡ ಪಾಟೀಲ್ ನಿಧನ

ದೇವೇಂದ್ರಗೌಡ ಪಾಟೀಲ್ ನಿಧನ Devendra Gowda Patil passed away

ಕೊಪ್ಪಳ 22: ತಾಲೂಕಿನ ಹಲಗೇರಿ ಗ್ರಾಮದ ಶಿಕ್ಷಕ ದೇವೇಂದ್ರಗೌಡ ಪಾಟೀಲ್(52) ಅನಾರೋಗ್ಯದಿಂದ ಭಾನುವಾರ ನಿಧನರಾದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ರಾಜಾಧ್ಯಕ್ಷ ಶಂಭುಲಿಂಗನಗೌಡ  ಪಾಟೀಲ್ ಹಲಗೇರಿ ಇವರ ಸಹೋದರ.ಮೃತರು ತಾಲೂಕಿನ ಹಣವಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಮೃತರಿಗೆ ತಾಯಿ, ಪತ್ನಿ ಹಾಗೂ ಓರ್ವ ಪುತ್ರ,ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಜೂ.23 ರ ಸೋಮವಾರ ಮಧ್ಯಾಹ್ನ 1 ಗಂಟೆಗೆ ಸ್ವಗ್ರಾಮ ಹಲಗೇರಿಯಲ್ಲಿ  ನೆರವೇರಲಿದೆ.