ವಿಕಸಿತ ಕೃಷಿ ಸಂಕಲ್ಪ ಅಭಿಯಾನ
Developed Agriculture Resolution Campaign
ತಾಳಿಕೋಟೆ 12: ತಾಲೂಕಿನ ಬಳಗಾನೂರ ಹಾಗೂ ಮಿಣಜಗಿ ಗ್ರಾಮದಲ್ಲಿ ಸ್ಥಳೀಯ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರ ವಿಜಯಪುರ ಇವರುಗಳ ಸಹಯೋಗದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ಪಶು ಸಂಗೋಪನೆ ವಿಷಯತಜ್ಞೆ ವಿಜಯಲಕ್ಷ್ಮೀ ಮುಂದಿನಮನಿ ಮಾತನಾಡಿ, ದನಕರುಗಳಿಗೆ ಬರತಕ್ಕ ಕಾಲುಬೇನೆರೋಗ, ಬಾಯಿರೋಗ, ಚಪ್ಪೆರೋಗ ಮತ್ತು ದನಗಳಿಗೆ ಲಸಿಕೆ ಹಾಕಿಸುವ ಬಗ್ಗೆ ಹಾಗೂ ಕೃಷಿ ಅಧಿಕಾರಿ ಮಹೇಶ ಜೋಶಿ ಬೀಜೋಪಚಾರ ಹಾಗೂ ಟ್ರೈಕೋಡರ್ಮದ ಮಹತ್ವ ಕುರಿತು ವಿವರಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಪಶು ಸಂಗೋಪನೆ ವಿಷಯತಜ್ಞ ಮಂಜುನಾಥರೆಡ್ಡಿ ನಿವೇದಿ ಅವರು ನಾಯಿ ಕಡಿದಾಗ ಆಗುವ ಅನಾಹುತ, ರೆಬಿಸ್ ಲಸಿಕೆಯನ್ನು ಸಕಾಲದಲ್ಲಿ ಹಾಕಿಸಿಕೊಳ್ಳದಿದ್ದರೆ ಮನುಷ್ಯನ ಮೆದುಳಿನ ಮೇಲೆ ಪರಿಣಾಮ ಬೀರಿ ಹುಚ್ಚಿಗೆ ಕಾರಣವಾಗಬಹುದು ಎಂದರು.
ಬೇಸಾಯಶಾಸ್ತ್ರದ ವಿಷಯತಜ್ಞೆ ಶಿಲ್ಪಾ ಜೋಗಳಾಪುರ ಅವರು ತೊಗರಿ ತಳಿಗಳು, ಬೆಳೆಗಳಿಗೆ ತಗುಲುವ ಕೀಟ-ರೋಗಬಾಧೆ ಮತ್ತು ಹತೋಟಿಕ್ರಮಗಳು, ಹತ್ತಿ, ತೊಗರಿ ತಳಿಗಳು ಸೂಕ್ತ ಬೇಸಾಯಕ್ರಮಗಳ ಕುರಿತು ವಿವರಿಸಿದರು.
ಕೃಷಿ ಇಲಾಖೆಯ ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸಂಗಮೇಶ ಪಾಟೀಲ, ಸಂಜೀವಿನಿ ಸಿಬ್ಬಂದಿ ಕಿರಣಕುಮಾರ, ಅಪ್ಪು ಕುಂಟರೆಡ್ಡಿ, ಕೃಷಿ ಸಖಿಯರು, ಮಿಣಜಗಿ ಹಾಗೂ ಬಳಗಾನೂರ ಗ್ರಾಮದ ರೈತರು, ಗಣ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 