ನೀರಾವರಿಗೆ ಸಂಬಂಧಿಸಿದಂತೆ ಸಾಕಷ್ಟು ಬೇಡಿಕೆ ಇದ್ದರೂ ಯೋಜನೆ ರೂಪಗೊಂಡಿಲ್ಲ: ರಾಜಕುಮಾರ ಟೋಪಣ್ಣವರ

ನೀರಾವರಿಗೆ ಸಂಬಂಧಿಸಿದಂತೆ ಸಾಕಷ್ಟು ಬೇಡಿಕೆ ಇದ್ದರೂ ಯೋಜನೆ ರೂಪಗೊಂಡಿಲ್ಲ: ರಾಜಕುಮಾರ ಟೋಪಣ್ಣವರ  Despite a lot of demand for irrigation, no plan has been formed: Prince Topannavara

           ಬೆಳಗಾವಿ 02:  ಮಲಪ್ರಭಾ ನದಿ, ಖಾನಾಪುರ, ಕಿತ್ತೂರು, ಬೈಲಹೊಂಗಲ, ರಾಮದುರ್ಗ, ಸವದತ್ತಿ ಜೀವನಾಡಿ, ಈ ನಾಲ್ಕು ತಾಲೂಕಿನ ನೀರಾವರಿಗೆ ಸಂಬಂಧಿಸಿದಂತೆ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳು ಆರಂಭವೇ ಆಗಿಲ್ಲ. ಇಲ್ಲಿ ಸಾಕಷ್ಟು ಬೇಡಿಕೆ ಇದ್ದರೂ ಯೋಜನೆ ರೂಪಗೊಂಡಿಲ್ಲ. ಕಾರ್ಯರೂಪಕ್ಕೆ ಬಂದಿಲ್ಲ ಎಂದು ರಾಜಕುಮಾರ ಟೋಪಣ್ಣವರ ಹೇಳಿದ್ದಾರೆ. ನಾಲ್ಕು ತಾಲೂಕಿನ ಜನರ ಬೇಡಿಕೆ ಇದ್ದರೂ ರೇಣುಕಾ ಸಾಗರದಿಂದ ಹುಬ್ಬಳ್ಳಿ-ಧಾರವಾಡಕ್ಕೆ ಕೃಷಿ, ಕೈಗಾರಿಕೆ ಹಾಗೂ ನಗರ ಪ್ರದೇಶಕ್ಕೆ ಸರಬಾರಾಜು ಆಗುತ್ತಿದೆ. ಆದರೆ ಬೆಳಗಾವಿ ಜಿಲ್ಲೆಯ ಈ ನಾಲ್ಕು ತಾಲೂಕಿನ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಬೆಳಗಾವಿ ಜಿಲ್ಲೆಯ ಬಹುತೇಕ ಕೈಗಾರಿಕಾ ಪ್ರದೇಶದಲ್ಲಿ ನೀರಿನ ಅಭಾವ ಇರುವ ಕಾರಣ ಉದ್ಯಮಿಗಳು ಟ್ಯಾಂಕರ್ ಮೂಲಕ ನೀರು ಬಳಕೆ ಮಾಡಿಕೊಳ್ಳುವ ದುಸ್ಥಿತಿ ಎದುರಾಗಿದೆ. ಇತ್ತೀಚೆಗೆ ರಾಜ್ಯ ಸರಕಾರ ರೇಣುಕಾ ಸಾಗರದಿಂದ 245 ಎಂಎಲ್ ಡಿ ಕುಡಿಯುವ ನೀರಿನ ನೆಪ ಹೇಳಿ ಧಾರವಾಡ ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಷಡ್ಯಂತ್ರ ಮಾಡಿದೆ.

           ಕಾರಣ ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಕುಡಿಯುವ ನೀರಿಗೆ ಆಕ್ಷೇಪ ಮಾಡಬಾರದು ಎನ್ನುವ ಉದ್ದೇಶಕ್ಕೆ ಇದನ್ನೆ ಬಂಡವಾಳವಾಗಿಸಿಕೊಂಡು ಧಾರವಾಡ ಜಿಲ್ಲೆಯ ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಹುನ್ನಾರ ನಡೆಸಿದ್ದಾರೆ.ಈಗಾಗಲೇ ಹಿಡಕಲ್ ಜಲಾಶಯ ಮತ್ತು ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ನದಿಯಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರಿನ ಪೈಪ್ ಲೈನ್ ಮೂಲಕ ನೀರು ತೆಗೆದುಕೊಂಡು ಹೋಗಿದ್ದರೂ ರೇಣುಕಾ ಸಾಗರದಿಂದ ನೀರು ಕೊಂಡೊಯುತ್ತಿರುವುದು ದುರುಂತದ ಸಂಗತಿ.ಹಿಡಕಲ್ ಜಲಾಶಯದ ನೀರು ಹುಬ್ಬಳ್ಳಿ - ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯುವ ಕಾಮಗಾರಿಯನ್ನು ತಡೆ ಹಿಡಿಯುವುದಾಗಿ ಹೇಳಿದ್ದ ಸಂಸದ ಜಗದೀಶ್ ಶೆಟ್ಟರ್ ಅವರು ಕರ್ಮಭೂಮಿಗೆ ನ್ಯಾಯ ಕೊಡಿಸುವ ಬದಲು ತವರು ಜಿಲ್ಲೆಯ ವ್ಯಾಮೋಹಕ್ಕೆ ಈ ಕಾಮಗಾರಿಯನ್ನು ವಿರೋಧ ಮಾಡುವ ಮೊಸಳೆ ಕಣ್ಣೀರು ಹಾಕಿದ್ದು ಬೆಳಗಾವಿ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.