4ನೆ ತಂಡದ ಎಪಿಸಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ

4ನೆ ತಂಡದ ಎಪಿಸಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ Departure parade of 4th batch APC trainees

ಬೆಳಗಾವಿ, ಫೆ.06:4ನೇ ತಂಡದ ಎಪಿಸಿ ಪ್ರಶಿಕ್ಷಣಾರ್ಥಿಗಳು ನಿರ್ಗಮನ ಪಥ ಸಂಚಲನವು ಫೆ. 6(ಶುಕ್ರವಾರ) ಖಾನಾಪುರದಲ್ಲಿನ ಪೋಲಿಸ್ ತರಬೇತಿ ಶಾಲೆಯ ಕವಾಯತ ಮೈದಾನದಲ್ಲಿ ಜರುಗಿತು.ಅಪರ ಪೋಲಿಸ್ ಮಹಾನಿರ್ದೆಶಕರಾದ ದೇವಜ್ಯೋತಿ ರೇ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತೋರಾಳಿ ಕೋಬ್ರಾ ಕ್ಯಾಂಪನ್ ಡಿ.ಐ.ಜಿ ರವೀಂದ್ರ.ಎಂ.ಎಲ್, ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಕೆ.ರಾಮರಾಜನ್ ಅವರುಗಳು ಪಥಸಂಚಲನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಖಾನಾಪುರ ಪೋಲಿಸ್ ತರಬೇತಿ ಶಾಲೆ ಪ್ರಾಂಶುಪಾಲರಾದ ಎಂ.ಎಂ.ಯಾದವಾಡ ಅವರು ವರದಿ ವಾಚನ ಮಾಡಿದರು. 

ಎಪಿಸಿ ಪ್ರಶಿಕ್ಷಣಾರ್ಥಿಗಳ ವೃತ್ತಿ ಬುನಾದಿ ತರಬೇತಿಯಲ್ಲಿ ವಿವಿಧ ಜಿಲ್ಲೆ ಹಾಗೂ ನಗರ ಘಟಕಗಳಿಂದ 345 ಎಪಿಸಿ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಸದರಿ ವೃತ್ತಿ ಬುನಾದಿ ತರಬೇತಿಯಲ್ಲಿ ಎಪಿಸಿ.20152 ದಿನೇಶಕುಮಾರ.ಎಸ್ ಅವರು ಸರ್ವೋತ್ತಮ ಪ್ರಶಸಸ್ತಿ ಪಡೆದುಕೊಂಡರು.