ಶಿಕ್ಷಕರ ಬಡ್ತಿಗೆ ನಿಗದಿಯಾದ ಟಿಇಟಿ ಪರೀಕ್ಷೆ ರದ್ದುಗೆ ಒತ್ತಾಯ
Demand for cancellation of TET exam scheduled for teacher promotion
ಶಿಕ್ಷಕರ ಬಡ್ತಿಗೆ ನಿಗದಿಯಾದ ಟಿಇಟಿ ಪರೀಕ್ಷೆ ರದ್ದುಗೆ ಒತ್ತಾಯ
ಹೂವಿನಹಡಗಲಿ 10: ಸೇವಾನಿರತ ಶಿಕ್ಷಕರಿಗೆ ಬಡ್ತಿಗೆ ನಿಗದಿಯಾಗಿರುವ ಟಿಇಟಿ ಪರೀಕ್ಷೆಯನ್ನ ರದ್ದುಗೊಳಿಸಲು ಕೂಡಲೇ ಸರ್ಕಾರದ ಮೇಲೆ ಒತ್ತಡ ತರಬೇಕು ಸೇರಿದಂತೆ ನಾನಾ ಬೇಡಿಕೆ ಈಡೇರಿಸಲು ಶಿಕ್ಷಕರ ಸಂಘದಿಂದ ಶಾಸಕ ಕೃಷ್ಣ ನಾಯಕ ಅವರಿಗೆ ಮನವಿ ಸಲ್ಲಿಸಿದರು. ಪಟ್ಟಣದಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆ ಯಲ್ಲಿ ಅದ್ಯಕ್ಷ ವಿ.ಬಿ.ಜಗದೀಶ್ ಮತ್ತು ಪದಾಧಿಕಾರಿಗಳು ಮನವಿ ಯಲ್ಲಿ ಶಿಕ್ಷಕರು ಕಾರ್ಯ ಕ್ರಮ ಮಾಡಲು ಗುರುಭವನ.ಹೆಚ್ಚುವರಿ ಶಿಕ್ಷಕರ ಸ್ಥಳಾಂತರ ಪ್ರಕ್ರಿಯೆಯಲ್ಲಿ ಶಿಕ್ಷಕರಿಗೆ ಇರುವ ಸಮಸ್ಯೆಯನ್ನು ಪರಿಹಾರ ಮಾಡುವುದು.. ಮುಖ್ಯಗುರುಗಳ ಹುದ್ದೆಗೆ ಬಡ್ತಿ ಕೊಡುಸುವುದು.ಗುಣಮಟ್ಟದ ಶಿಕ್ಷಣ ನೀಡಲು ತರಗತಿಗೊಬ್ಬ ಶಿಕ್ಷಕರನ್ನು ನೇಮಿಸಲು ಸರಕಾರಕ್ಕೆ ಒತ್ತಡ ತರುವುದು. ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪಿಟಿಆರ್ ಹೊರತುಪಡಿಸಿ ಒಬ್ಬ ಹಿಂದಿ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರನ್ನು ನೇಮಿಸುವಂತೆ ಸರಕಾರಕ್ಕೆ ಒತ್ತಡ ತರಬೇಕೆಂದು ಮನವಿ ಮಾಡಲಾಗಿದೆ.ಇದೇ ವೇಳೆ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಸಿ.ಮೈಲಾರಿ.ವಿನೋದ್ ಕುಮಾರಿ.ಖಜಾಂಚಿ ಪಕ್ಕೀರಸಾಬ್. ಪ್ರಧಾನ ಕಾರ್ಯದರ್ಶಿ ಯೇಸು. ಸಹ ಕಾರ್ಯದರ್ಶಿ ಯಾದ ಮಾಲತೇಶ. ಎನ್.ಡಿ.ರೇಖಾ.ಆನಂದ .ಚಂದ್ರ್ಪ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 