ಕಾರವಾರ ಬಳಿಯ ಕದಂಬ ನೌಕಾನೆಲೆಗೆ ಪಾರ್ಲಿಮೆಂಟರಿ ಡಿಫೆನ್ಸ ಕಮಿಟಿ ಭೇಟಿ
Deiffence commety
ಕಾರವಾರ ಬಳಿಯ ಕದಂಬ ನೌಕಾನೆಲೆಗೆ ಪಾರ್ಲಿಮೆಂಟರಿ ಡಿಫೆನ್ಸ ಕಮಿಟಿ ಭೇಟಿ
ಕಾರವಾರ .ಜ.20: ಕಾರವಾರ ಬಳಿಯ ಕದಂಬ ನೌಕಾನೆಲೆಗೆ ಪಾರ್ಲಿಮೆಂಟರಿ ಡಿಫೆನ್ಸ ಕಮಿಟಿ ಭೇಟಿ ನೀಡಿ , ಪ್ತಸಕ್ತ
ಬೆಳವಣಿಗೆ ಹಾಗೂ ಪ್ರಗತಿ ಪರಿಶೀಲನೆ ಮಾಡಿತು.
ಸಂಸದ ಜುಅಲ್ ಓರಮ್ ಅಧ್ಯಕ್ಷತೆಯಲ್ಲಿ ಆಗಮಿಸಿ ಮೂವತ್ತು ಜನರ ಕಮಿಟಿಯಲ್ಲಿ ರಾಜ್ಯಸಭಾ ಸದಸ್ಯ ಶರದ್ ಪವಾರ್ ,ವಿಜಯೇಂದ್ರ ಸಿಂಗ್,ಡಾ.ಅಶೋಕ್ ,ವಾಜಪೇಯಿ,ಪ್ರೇಮಚಂದ್ ಗುಪ್ತಾ,ಸಂಸದರಾದ ಕುಮಾರ್ ಡ್ಯಾನಿಷ್ ಅಲಿ,ಅಜಯ್ ಭಟ್, ಕರ್ನಾಟಕದ ಅಣ್ಣಾಸಾಬ್ ಜೊಲ್ಲೆ,ರಾಮ್ ಶಂಕರ್ ಕಟಾರಿಯ ,ಪಿ.ಆರ್.ಫಣಿವೇಂದ್ರ ಮುಂತಾದವರು ಆಗಮಿಸಿದ್ದರು
ಬುಧುವಾರ ಮಧ್ಯಾಹ್ನ ಆಗಮಿಸಿದ ಸಮಿತಿ ಕದಂಬ ನೌಕಾ ನೆಲೆಯಲ್ಲಿ ಎರಡನೇ ಹಂತದ ಕಾಮಗಾರಿ ಹಾಗೂ ಭದ್ರತೆ ಕುರಿತು ಸಭೆ ನಡೆಸಿ ಮಾಹಿತಿ ಪಡೆಯಿತು.ಏಷ್ಯಾ ಖಂಡದ ಅತೀ ದೊಡ್ಡ ನೌಕಾನೆಲೆ ಎಂಬ ಖ್ಯಾತಿ ಹೊಂದಿರುವ ಕಾರವಾರದ ಕದಂಬ ನೌಕಾ ನೆಲೆಯು 2005 ರಲ್ಲಿ ದೇಶಕ್ಕೆ ಸಮರ್ಪಣೆಯಾಗಿದೆ.
ನೇವಿ ವಿಮಾನ ನಿಲ್ದಾಣ, ವಜ್ರಕೋಶ, ಶಿಫ್ ಲಿಫ್ಟ್ ಬಗ್ಗೆ ಸಹ ಮಾಹಿತಿ ಪಡೆಯಿತು.ಐಎನ್ ಎಸ್ ವಿಕ್ರಮಾದಿತ್ಯ ಆಧುನೀಕರಣದ ವಿವರ ಸಹ ಪಡೆಯಿತು.
ನಂತರ 2018 ರಲ್ಲಿ ಎರಡನೇ ಹಂತದ 13,500 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಇದರ ಖರ್ಚು ವೆಚ್ಚ,ಕಾಮಗಾರಿ ಗುಣಮಟ್ಟ,ಪ್ರಸಕ್ತ ಸ್ಥಿತಿಗಳ ಬಗ್ಗೆ ಅಧ್ಯಯನ ನೆಡೆಸಿ ಸಮಿತಿಯು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ಜೊತೆಗೆ ಹಣ ಬಿಡುಗಡೆ ಗೆ ಶಿಫಾರಸ್ಸು ಮಾಡುತ್ತದೆ. ಕಮಿಟಿಯಲ್ಲಿ ಅಧಿಕಾರಿಗಳು ಸೇರೆ ಒಟ್ಟು ಮೂವತ್ತು ಜನರಿದ್ದು ಕದಂಬ ನೌಕಾನೆಲೆಯಲ್ಲಿ ಸಭೆ ನಡೆಸಿ ಕಾಮಗಾರಿ ಪರಿಶೀಲನೆ ಸಹ ಮಾಡಿತು. ಇದಕ್ಕೂ ಮುನ್ನ ಗೋವಾದ
ನೇವಿ ಕೇಂದ್ರಕ್ಕೆ ಸಮಿತಿ ಭೇಟಿ ನೀಡಿತ್ತು. ಸಮಿತಿಯಲ್ಲಿದ್ದ ಸಂಸದ ರಾಹುಲ್ ಗಾಂಧಿ, ಪ್ರತಾಪ್ ಸಿಂಹ ನೌಕಾನೆಲೆಗೆ ಬಂದಿರಲಿಲ್ಲ
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 