ಇಂದಿನಿಂದ ದಾನಮ್ಮದೇವಿ ಜಾತ್ರೆ ಆರಂಭ
Danammadevi fair begins today
ಇಂಡಿ 18: ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ದಾನಮ್ಮದೇವಿ 4 ವರ್ಷದ ಜಾತ್ರಾ ಮಹೋತ್ಸವ ಇದೆ ದಿನಾಂಕ 19-11-2025 ರಿಂದ 20 -11-2025 ವರಿಗೆ ನಡೆಯುವದು ಎಂದು ಜಾತ್ರಾಸಮಿತಿಯ ಅಧ್ಯಕ್ಷ ಅನೀಲ ಪ್ರಸಾದ ಏಳಿಗೆ ತಿಳಿಸಿದ್ದಾರೆ. 19 ರಂದು ಬುಧವಾರ ಸಾಯಂಕಾಲ 4 ಗಂಟೆಗೆ ಬಾಲ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಂತರ 5 ಗಂಟೆಗೆ ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಯಂಕಾಲ 6 ಗಂಟೆಗೆ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಗುರುವಾರ 20 ರಂದು ಚಟ್ಟಿ ಅಮಾವಾಸ್ಯೆ ಬೆಳಗ್ಗೆ 5 ಗಂಟೆಗೆ ದಾನಮ್ಮದೇವಿ ಮೂರ್ತಿಗೆ ರುದ್ರಾಭಿಷೇಕ ನಂತರ 9 ಗಂಟೆಗೆ ಪೆಟ್ರೋಲ್ ಪಂಪ ಹಿಂದುಗಡೆ ಸಿಂದಗಿ ರಸ್ತೆ ಬನ್ನಿಮಂಟಪದಿಂದ ಪಲ್ಲಕ್ಕಿ ಮಹೋತ್ಸವ ಶ್ರೀ ದಾನಮ್ಮದೇವಿ ಕಾಲೋನಿ ಸಿಂದಗಿ ರಸ್ತೆಯಿಂದ ಸಕಲ ವಾದ್ಯ ವೈಭವಗಳೊಂದಿಗೆ ಶ್ರೀ ದಾನಮ್ಮದೇವಿ ದೇವಸ್ಥಾನಕ್ಕೆ ತಲುಪುವುದು.
ಅದೇ ದಿನ ಸಾಯಂಕಾಲ 4 ಗಂಟೆಗೆ ಧರ್ಮಸಭೆ ಹಾಗೂ ಸುಮಂಗಲೆಯರಿಂದ ಉಡಿ ತುಂಬುವ ಕಾರ್ಯಕ್ರಮ, ನಂತರ ಸಾಯಂಕಾಲ 8 ಗಂಟೆಗೆ ಬೀರೇಶ ವಾಲಿ ಕಲಾತಂಡ ವಿಜಯಪುರ ಇವರಿಂದ ಹಾಸ್ಯ ಹಾಗೂ ರಸಮಂಜರಿ ಕಾರ್ಯಕ್ರಮ ಜರಗುವವು. ಈ ಕಾರ್ಯಕ್ರಮಕ್ಕೆ ಅನೇಕ ಪೂಜ್ಯರು ಮತ್ತು ಶಾಸಕ ಯಶವಂತರಾಯಗೌಡ ಪಾಟೀಲ, ಸಂಸದ ರಮೇಶ ಜಿಗಜಿಣಗಿ ಪಾಲ್ಗೊಳ್ಳವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶಿರಶ್ಯಾಡ ಮಠದ ಅಭಿನವ ಮುರುಗೆಂದ್ರ ಶಿವಾಚಾರ್ಯರು, ಮಲ್ಲಿಕಾರ್ಜುನ ಬುರಕಡಲಿ, ಡಾ. ಮಲ್ಲಿಕಾರ್ಜುನ ಬಿರಾದಾರ, ಶಿವಾನಂದ ತಾಂಬೆ, ದಾನಯ್ಯ ಮಠಪತಿ, ರಾಜು ಬಾಂಬೆ, ಪ್ರಶಾಂತ ಗುಂದಗಿ, ರಾಜೇಶ್ವರಿ ಕ್ಷತ್ರಿ, ಶಶಿಕಲಾ ಬೆಟಿಗೇರಿ, ಪೂಜಾ ಏಳಗಿ, ಶ್ಯಾಮಲಾ ಬಗಲಿ, ಶೋಭಾ ದೇಸಾಯಿ, ಭಾರತಿ ಪತ್ರಿಮಠ, ಮಂಗಲಾ ಲಾಳಸಂಗಿ, ಶೀತಲ ನಾಡಗೌಡ, ಬೋರಮ್ಮ ಬಿರಾದಾರ, ಅನಿತಾ ಗಣಿ ಸೇರಿದಂತೆ ಮತ್ತಿತರರು ಇದ್ದರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 