ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ದಲಿತ ಸಂಘರ್ಷ ಸಮಿತಿ ಪ್ರತಿಭಟನೆ Dalit Sangharsh Samiti protest

ದಲಿತ ಸಂಘರ್ಷ ಸಮಿತಿ ಪ್ರತಿಭಟನೆ 

ಬೆಳಗಾವಿ 14: ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಸಾಹೇಬರ ಮೇಲೆ ಶೂ ಎಸೆದು ಅವಮಾನಿಸಿರುವ ವಕೀಲ ರಾಕೇಶ ಕಿಶೋರ್ ದೇಶ ದ್ರೋಹಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಬೆಳಗಾವಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ನ್ಯಾಯಲಯದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮನವಿ ಸಲ್ಲಿಸಿದರು. 

ಇಂತಹ ಕೃತ್ಯವು ಸಂವಿಧಾನದ ಮೇಲೆ ಪ್ರಜಾಫ್ರಭುತ್ವದ ಮೇಲೆ ಹಾಗು ಭಾರತೀಯ ಪ್ರತಿಯೊಂದು ಪ್ರಜೆಗೆ ಅವಮಾನ ಎಂದು ಪರಿಗಣಿಸಿ ಆರೋಪಿ ವಕೀಲ ರಾಕೇಶ್ ಈತನನ್ನು ಭಯೋತ್ಪಾದಕ ಕಾನೂನಿನ ಅಡಿ ಶಿಕ್ಷೆ ನೀಡಬೇಕೆಂದು ಆಗ್ರಹಿಸುತ್ತೇವೆ . ಆರೋಪಿ ವಕೀಲ ರಾಕೇಶ್ ಕಿಶೋರ್ ಈತನಿಗೆ ನೀಡಿದ ಶಿಕ್ಷೆಯಿಂದ ಮುಂಬರುವ ದಿನಗಳಲ್ಲಿ ಬೇರೆ ಯಾರು ಸಂವಿದಾನಕ್ಕೆ ಅಪಮಾನ ಮಾಡುವುದಿಲ್ಲವೆಂದು ನಂಬಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.