ಶಿಗ್ಗಾವಿ 13 : ಇಂದು ಶಿಕ್ಷಣ ವ್ಯಾಪಾರೀಕರಣವಾಗಿರುವ ಕಾರಣ ಪಾಲಕರು ಪೋಷಕರು ಖಾಸಗೀ ಶಾಲೆಯ ವ್ಯಾಮೋಹಕ್ಕೆ ಒಳಗಾಗದೇ ಸರಕಾರಿ ಶಾಲೆಯ ಪ್ರವೇಶಾತಿ ಪಡೆಯಿರಿ ಎಂದು ಮುಖ್ಯೋಪಾಧ್ಯಾಯಿನಿ ವಿನೋದಾ ಪಾಟೀಲ ಹೇಳಿದರು. ಪಟ್ಟಣದ ವಾರ್ಡ ನಂ 5ರ ಸರ್ಕಾರಿ ಪ್ರೌಢಶಾಲೆ ಯಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ನುರಿತ ಶಿಕ್ಷಕರಿಂದ ಸ್ವಾವಲಂಬಿ ಜೀವನ ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ ಎಂದರು. ಕಾಂಗ್ರೆಸ್ ಮುಖಂಡ ಮುಕ್ತಾರಖಾನ ತಿಮ್ಮಾಪೂರ ಮಾತನಾಡಿ ಮಕ್ಕಳು ಮೊಬೈಲ್ ಹಾಗೂ ಟಿ.ವ್ಹಿ ಯಿಂದ ದೂರವಿದ್ದು ದಿನನಿತ್ಯ ಚೆನ್ನಾಗಿ ವಿಧ್ಯಾಭ್ಯಾಸ ಮಾಡುವುದರ ಜೊತೆಗೆ ಶಾಲೆಗೆ ಕೀರ್ತಿ ತರಬೇಕು ಹಾಗೂ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಈ ಸಂದರ್ಭದಲ್ಲಿಕರ್ನಾಟಕ ರಾಜ್ಯ ಕಾರ್ಮಿಕರ ವಿಕಾಸ ವೇದಿಕೆ ರಾಜ್ಯ ಉಪಾಧ್ಯಕ್ಷ ಇಮಾಮ ಹುಸೇನ್ ಆದಂಭಾಯಿ, ಶಿಕ್ಷಕರಾದ ಬಸವರಾಜ ಬಸರೀಕಟ್ಟಿ,ಸಿ.ಎಸ್.ಚರಂತಿಮಠ,ವಿದ್ಯಾವತಿ ಹೂಗಾರ, ನಾಗರಾಜ ಹುಲೇಕಲ್,ಭರತಕುಮಾರ ಕಳ್ಳೀಮನಿ, ಭಾರತಿ ಹೂಗಾರ, ಬಸವರಾಜ ಮಮದಾಪೂರ, ಮೋಹನ್ ಹಿರೋಲಾಲ ಸೇರಿದಂತೆ ಶಾಲಾ ಮಕ್ಕಳು, ಪಾಲಕರು ಉಪಸ್ಥಿತರಿದ್ದರು.