ಚಾನಾಳ್ ನಲ್ಲಿ ಸಾಂಸ್ಕೃತಿಕ ಸಂಭ್ರಮ

ಚಾನಾಳ್ ನಲ್ಲಿ ಸಾಂಸ್ಕೃತಿಕ ಸಂಭ್ರಮ Cultural celebration at Chanal

ಬಳ್ಳಾರಿ 26:  ಶ್ರೀ ಕಬ್ಬಾಳಮ್ಮ ಕಲಾ ಕೃಷಿ ಟ್ರಸ್ಟ್‌ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ವತಿಯಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಶ್ರೀಮತಿ ಹುಲಿಗೆಮ್ಮ ಮತ್ತು ತಂಡ ಇವರಿಂದ ಬಳ್ಳಾರಿ ತಾಲೂಕಿನ ಚಾನಾಳ್ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಬಯಲು ವೇದಿಕೆಯಲ್ಲಿ ಬುಧವಾರ ಸಂಜೆ 7 ಗಂಟೆಗೆ ಬಸವಜ್ಯೋತಿ ತೊಗಲುಗೊಂಬೆ ಪ್ರದರ್ಶನ ನಡೆಯಿತು.  

ಕಾರ್ಯಕ್ರಮವನ್ನು ಚಾನಾಳ್ ಗ್ರಾಮದ ಮುಖಂಡರಾದ ಸಿ.ಆರ್‌. ವಿರೂಪಾಕ್ಷರೆಡ್ಡಿ ಉದ್ಘಾಟಿಸಿದರು.  

ನಂತರ ಮಾತನಾಡಿ, ಪ್ರಸ್ತುತ ದಿನ ಮಾನಗಳಲ್ಲಿ ತೊಗಲುಗೊಂಬೆ ಕಲಾ ಪ್ರದರ್ಶನ ನಡೆಸಿಕೊಡುತ್ತಿರುವುದು ಶ್ಲಾಘನೀಯ. ಈಗಿನ ಟಿವಿ ಧಾರಾವಾಹಿ, ಮೊಬೈಲ್ ಹಾವಳಿಯಿಂದಾಗಿ ಕಲಾ ಪ್ರಕಾರಗಳು ಮರೆ ಮಾಚುತ್ತಿವೆ. ಇಂತಹದರಲ್ಲಿ ತೊಗಲುಗೊಂಬೆ ಪ್ರದರ್ಶನ ನಡೆಯುತ್ತಿದ್ದು, ಇದನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.  

ಚಾನಾಳ್ ಗ್ರಾಪಂ ಸದಸ್ಯ ವಿ.ನಾಗರಾಜರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.  

ಅತಿಥಿಗಳಾಗಿ ಗ್ರಾಪಂ ಸದಸ್ಯೆ ಯಲ್ಲಮ್ಮ ಶೇಖರ​‍್ಪ, ಗ್ರಾಪಂ ಬಿಲ್ ಕಲೆಕ್ಟರ್ ಜಿ. ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.  

ಗ್ರಾಪಂನ ಹಳ್ಳಪ್ಪ ಸ್ವಾಗತಿಸಿದರು. ಗ್ರಾಪಂ ಸಿಬ್ಬಂದಿ ತಿಪ್ಪಮ್ಮ ಕಾರ್ಯಕ್ರಮ ನಿರೂಪಿಸಿದರು.