ವಿದ್ಯಾರ್ಥಿಗಳಿಗೆ ಅಗ್ನಿ ಅವಘಡ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಾಗೃತಿ

ವಿದ್ಯಾರ್ಥಿಗಳಿಗೆ ಅಗ್ನಿ ಅವಘಡ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಾಗೃತಿ  Creating awareness among students about the measures to be taken during a fire incident


ಲಕ್ಷ್ಮೇಶ್ವರ, ಆ. 10: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಸೋಮವಾರ ವಿನಯ ಬಳ್ಳಾರಿ ಅಗ್ನಿಶಾಮಕ ದಳದ ಪ್ರಭಾರಿ ಅಧಿಕಾರಿಗಳ ತಂಡ ಭೇಟಿ ನೀಡಿ, ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿತು.  

ಅಗ್ನಿಶಾಮಕ ದಳದ ಸಿಬ್ಬಂದಿ ಅಗ್ನಿ ಅವಘಡದ ಸಂದರ್ಭದಲ್ಲಿ ಸುರಕ್ಷಿತವಾಗಿ ಹೊರಬರುವುದು, ಬೆಂಕಿ ನಂದಿಸುವ ವಿಧಾನ ಹಾಗೂ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.  

ತಂಡದ ಸದಸ್ಯರಾದ ಶಿವಪ್ಪ ಕೋಲಿ, ಫಕೀರೇಶ ಇಚ್ಚಂಗಿ, ರಮೇಶ ಹಲಕರ್ಣಿ ಹಾಗೂ ಸುರೇಶ ಗುಂಜಳ ಅವರು ಅಗ್ನಿಶಾಮಕ ದಳದ ಉದ್ದೇಶ, ಕರ್ತವ್ಯ ಹಾಗೂ ಕಾರ್ಯವೈಖರಿಯನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.  

ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗುರುಗಳಾದ ಬಸವರಾಜ ಕುಂಬಾರ, ಆರ್‌.ಎಂ. ಶಿರಹಟ್ಟಿ, ಆರ್‌.ಕೆ. ಉಪನಾಳ, ಎಚ್‌.ಡಿ. ನಿಂಗರೆಡ್ಡಿ, ಎಲ್‌.ಎ. ಬಣಕಾರ, ತರಬೇತಿದಾರರಾದ ಗೌರವಮ್ಮ ಮಜ್ಜಿಗುಡ್ಡ ಹಾಗೂ ಪಾರ್ವತಿ ಡಿಡಿಬಿ, ಅಡುಗೆ ಸಿಬ್ಬಂದಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.