ಭಕ್ತಿ, ಮುಕ್ತಿ ಚಿಂತನೆ ಸರಿದಾರಿಗೆ ದಾರಿ: ಬಿ.ಡಿ. ಪಾಟೀಲ

ಭಕ್ತಿ, ಮುಕ್ತಿ ಚಿಂತನೆ ಸರಿದಾರಿಗೆ ದಾರಿ: ಬಿ.ಡಿ. ಪಾಟೀಲ  Contemplation on devotion and liberation leads to the right path: B.D. Patil


ಇಂಡಿ 25: ಬುಗಟಗೇರಿ ತಾಂಡಾದಲ್ಲಿ   ಪಾಂಡುರಂಗ   ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ, ಭಕ್ತಿ ಹಾಗೂ ಮುಕ್ತಿಯ ಚಿಂತನೆಗಳು ಮನುಷ್ಯನನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಭಕ್ತಿ, ಧರ್ಮ ಹಾಗೂ ಆಧ್ಯಾತ್ಮಿಕ ಚಿಂತನೆಗಳು ಸದ್ಗುಣ, ಶಾಂತಿ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ. ರಮೇಶ ರಾಠೋಡ, ಅನೀಲ ಜಾದವ, ನಾರಾಯಣ ರಾಠೋಡ ಸೇರಿದಂತೆ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.