ಕಾಂಗ್ರೇಸ ಕಾರ್ಯಕರ್ತರ ವಿಜಯೋತ್ಸವ

ಕಾಂಗ್ರೇಸ ಕಾರ್ಯಕರ್ತರ ವಿಜಯೋತ್ಸವ Congress workers celebrate victory


ಶಿಗ್ಗಾವಿ  04 : ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಕಾಂಗ್ರೇಸ ಮುಖಂಡರು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವವನ್ನು ಆಚರಿಸಿದರು.   ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮುನ್ನಾ ಅಹ್ಮದಖಾನ ಪಠಾಣ, ಬ್ಲಾಕ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಶೇಖಪ್ಪ ಮಣಕಟ್ಟಿ, ಮಹಾಂತೇಶ ಸಾಲಿ, ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಪ್ರೇಮಾ ಪಾಟೀಲ, ಅಣ್ಣಪ್ಪ ಲಮಾಣಿ, ಮಲ್ಲಮ್ಮ ಸೋಮನಕಟ್ಟಿ, ಮಜೀದ ಮಾಳಗಿಮನಿ, ಮಲ್ಲಿಕಾರ್ಜುನಗೌಡ. ಪಾಟೀಲ, ಬಾಬರ ಬಾವೋಜಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.