ಗುಣಮಟ್ಟದ ಜೊತೆಗೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ: ಸಚಿವ ಸತೀಶ್ ಜಾರಕಿಹೊಳಿ

ಗುಣಮಟ್ಟದ ಜೊತೆಗೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ: ಸಚಿವ ಸತೀಶ್ ಜಾರಕಿಹೊಳಿ  Complete the work within the stipulated time with quality: Minister Satish Jarkiholi

ಯರಗಟ್ಟಿ 29:  ಸಮೀಪದ ಗೋವನಕೊಪ್ಪ ಗ್ರಾಮದ  ಹತ್ತಿರದ ಘಟಪ್ರಭಾ ಬಲದಂಡೆ ಕಾಲುವೆ 67ಕಿ.ಮಿ ಕಾಮಗಾರಿ ಮಾನ್ಯ ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ  ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿ "ಹಿಡಕಲ್ ಜಲಾಶಯ ಒಳ ಹರಿವು ಹೆಚ್ಚಾಗುತ್ತಿದೆ. ಈ ಭಾಗದ ರೈತರಿಗೆ  ಘಟಪ್ರಭಾ ಬಲದಂಡೆ ಕಾಲುವೆ ರೈತರ ಜೀವನಾಡಿಯಾಗಿದ್ದು. ಈ ಭಾಗದಲ್ಲಿ ಸರಿಯಾಗಿ  ಮಳೆ ಆಗುತ್ತಿಲ್ಲ.  ಅದಕ್ಕಾಗಿ ಗುಣಮಟ್ಟದ ಜೊತೆಗೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದ್ದು ಎಂದು ಹೇಳಿದರು.  

ಈ ಸಂದರ್ಭದಲ್ಲಿ  ಸವದತ್ತಿ ಶಾಸಕರಾದ ವಿಶ್ವಾಸ ವೈದ್ಯ, ಗೋಕಾಕ ನೀರಾವರಿಯ ವಿಭಾಗದ  ಕಾರ್ಯನಿರ್ವಾಹಕ ಅಭಿಯಂತರು ಕಾಖಂಡಕಿ, ಸಹಾಯಕ   ಅಭಿಯಂತರು ಶ್ರೀನಿವಾಸ್ ಪಾಟೀಲ, ಶಿವು ಪಾಟೀಲ, ಎಪಿಎಂಸಿ ಅಧ್ಯಕ್ಷರಾದ ನೀಲಕಂಠ ಶಿದಬಸನ್ನವರ,  ಬೆಮೂಲ ನಿರ್ದೇಶಕ ಶಂಕರ ಇಟ್ನಾಳ, ಬಸು ಸತ್ತೂರಿ, ಪ್ರಕಾಶ್ ವಾಲಿ, ಬಂಗಾರೆಪ್ಪ ಹರಳಿ, ಮಲಿಕಸಾಬ್ ಬಾಗವಾನ್,ಪ್ರವೀಣ ರಾಮಪ್ಪನವರ,  ಶಿವೂ ರಾಠೋಡ್, ಗುತ್ತಿಗೆದಾರರಾದ  ಬಾಳೇಶ ಕೌಜಲಗಿ, ಚೆನ್ನಪ್ಪ ಗುದಗನ್ನವರ ಹಾಗೂ  ಮತ್ತಿತರರು ಉಪಸ್ಥಿತರಿದ್ದರು.