ಸಂವಹನ ಕೌಶಲ್ಯ ವೃತ್ತಿ ಜೀವನಕ್ಕೆ ಅವಶ್ಯಕವಾಗಿದೆ : ಪ್ರೊ. ರಾಜು ಬಾಗಲಕೋಟ

             ಸಂವಹನ ಕೌಶಲ್ಯ ವೃತ್ತಿ ಜೀವನಕ್ಕೆ ಅವಶ್ಯಕವಾಗಿದೆ : ಪ್ರೊ. ರಾಜು ಬಾಗಲಕೋಟ Communication skills are essential for career: Prof. Raju Bagalkota

ಲೋಕದರ್ಶನ ವರದಿ 

            ಸಂವಹನ ಕೌಶಲ್ಯ ವೃತ್ತಿ ಜೀವನಕ್ಕೆ ಅವಶ್ಯಕವಾಗಿದೆ : ಪ್ರೊ. ರಾಜು ಬಾಗಲಕೋಟ 

ವಿಜಯಪುರ   06: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂವಹನ ಕೌಶಲ್ಯ ಪ್ರತಿಯೊಬ್ಬರ ವೃತ್ತಿಪರ ಜೀವನದ ಅವಿಭಾಜ್ಯ ಅಂಶವಾಗಿದೆ. ಯಾವುದೇ ಕ್ಷೇತ್ರದಲ್ಲಿರಲಿ, ಯಶಸ್ಸನ್ನು ಸಾಧಿಸಲು ಕೇವಲ ವಿಷಯಜ್ಞಾನ ಮಾತ್ರ ಸಾಕಾಗದೆ, ಸರಿಯಾದ ರೀತಿಯಲ್ಲಿ ಮಾತನಾಡುವ, ಆಲಿಸುವ ಹಾಗೂ ಅಭಿವ್ಯಕ್ತಗೊಳ್ಳುವ ಕೌಶಲ್ಯಗಳು ಅತ್ಯಂತ ಅಗತ್ಯವಾಗಿವೆ ಎಂದು ಮಹಿಳಾ ವಿಶ್ವವಿದ್ಯಾನಿಲಯದ ಕಲಾ ನಿಕಾಯದ ಡೀನ್  ಪ್ರೊ.ರಾಜು ಬಾಗಲಕೋಟ ಹೇಳಿದರು.  

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಯನ ವಿಭಾಗ ಮತ್ತು ವಿಜಯಪುರದ ನವಬಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ, ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ, ಉನ್ನತ ಶಿಕ್ಷಣ ಇಲಾಖೆ, ಭಾರತ ಸರ್ಕಾರ, ಮತ್ತು ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಮಂಡಳಿಯ ಅನುದಾನದ ಅಡಿಯಲ್ಲಿ ಇತ್ತಿಚಿಗೆ ನಡೆದ “ವೃತ್ತಿ ಕೌಶಲ್ಯವಾಗಿ ಸಂವಹನ” ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.  

ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸಿಕೊಳ್ಳಲು ಸಂವಹನ ಕೌಶಲ್ಯಗಳ ಅಭ್ಯಾಸ ಅತ್ಯಂತ ಮುಖ್ಯವಾಗಿದೆ. ಭಾಷೆಯ ಜತೆಗೆ ಹಾವಭಾವ, ಮುಖಚರ್ಯೆ, ಮಾತಿನ ಶೈಲಿ, ಧ್ವನಿಯ ಟೋನ್ ಮೊದಲಾದ ಅಂಶಗಳು ಸಮಾನವಾಗಿ ಪ್ರಭಾವ ಬೀರುತ್ತವೆ. ಸಂವಹನ ಕೌಶಲ್ಯಗಳು ಉತ್ತಮವಾಗಿದ್ದರೆ, ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚುವುದು, ಸಾಮಾಜಿಕ ಸಂಪರ್ಕ ಬಲವಾಗುವುದು ಮತ್ತು ಉದ್ಯೋಗಾವಕಾಶಗಳೂ ಕೂಡ ಹೆಚ್ಚಾಗುತ್ತವೆ ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನವಬಾಗದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅಮೋಘಸಿದ್ದ ಹಂಜಗಿ ಮಾತನಾಡಿ, ಉತ್ತಮ ಸಂವಹನ ಕೌಶಲ್ಯವು ಜೀವನದಲ್ಲಿ ಪರಿಪಕ್ವತೆ ಹಾಗೂ ಪರಿಪೂರ್ಣತೆಯನ್ನು ತಂದುಕೊಡುತ್ತದೆ. ಸಂವಹನ ಕೌಶಲ್ಯವು ಕೇವಲ ಮಾತಿನ ಶೈಲಿ ಮಾತ್ರವಲ್ಲ, ಅದು ವ್ಯಕ್ತಿಯ ಆಲೋಚನೆ, ನಡವಳಿಕೆ ಮತ್ತು ವ್ಯಕ್ತಿತ್ವದ ಪ್ರತಿಬಿಂಬವಾಗಿದೆ ಎಂದು ಹೇಳಿದರು. 

ಕಾರ್ಯಗಾರದಲ್ಲಿ ವಿವಿಧ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಂಶೋದನಾ ವಿದ್ಯಾರ್ಥಿಗಳು,  ಬೋದಕ ಹಾಗೂ ಬೋದಕೇತರ ಸಿಬ್ಬಂದಿಗಳು, ಮತ್ತು ಉಪಸ್ಥಿತರಿದ್ದರು. 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಪ್ರಕಾಶ ಹಾವೇರಿಪೇಟ ಸ್ವಾಗತಿಸಿದರು, ಇಂಗ್ಲಿಷ್ ಅಧ್ಯಾಯನ ವಿಭಾಗದ ಡಾ. ದೀಪಕ್ ಶಿಂದೆ ವಂದಿಸಿದರು,   

  


ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಯನ ವಿಭಾಗ ಮತ್ತು ವಿಜಯಪುರದ ನವಬಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ, ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ, ಉನ್ನತ ಶಿಕ್ಷಣ ಇಲಾಖೆ, ಭಾರತ ಸರ್ಕಾರ, ಮತ್ತು ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಮಂಡಳಿಯ ಅನುದಾನದ ಅಡಿಯಲ್ಲಿ ಇತ್ತಿಚಿಗೆ ನಡೆದ “ವೃತ್ತಿ ಕೌಶಲ್ಯವಾಗಿ ಸಂವಹನ” ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಪ್ರೊ.ರಾಜು ಬಾಗಲಕೋಟ ಮಾತನಾಡಿದರು.