ಕುಸಿದ ಮನೆಯ ಗೋಡೆ: ಅಪಾಯದಿಂದ ಬಾಣತಿ ಪಾರು
Collapsed house wall: Nursing mother escapes
ಆಲಮೇಲ 19: ತಾಲೂಕಿನ ಕಡಣಿ ಭೌರಮ್ಮ ಬೀರಪ್ಪ ಪೂಜಾರಿ ಎಂಬುವರ ಮನೆ ಮಳೆಯಿಂದ ಮಧ್ಯರಾತ್ರಿ 12 ಗಂಟೆಗೆ ಗೋಡೆ ಕುಸಿದು ಬಿದ್ದಿದೆ. ಮನೆಯ ಒಳಗೆ ಹೊರಸಿನ ಮೇಲೆ ಮಲಗಿಕೊಂಡಿದ್ದ ಬಾಣಂತಿ ಕಾಲ ಮೇಲೆ ಚವಣಿ ಬಿದ್ದಿರುವುದು ಸಣ್ಣ ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.
ಭೌರಮ್ಮ ಪೂಜಾರಿ, ಯಲ್ಲಪ್ಪ ಪೂಜಾರಿ, ಕಾವೇರಿ, ಅಂಜಲಿ, ಅಮೃತ ಮಕ್ಕಳು ಮಲಗಿದ್ದೆವು, ಜಿಟಿ ಜಿಟಿ ಮಳೆಯಿಂದ ಗೋಡೆ ಕುಸಿಯಿತು. ದೇವರು ದೊಡ್ಡವನು ಜೀವಕ್ಕೆ ಅಪಾಯವಾಗಿಲ್ಲವೆಂದು ಭೌರಮ್ಮ ಹೇಳಿದಳು.
ರಾತ್ರಿ 12 ಗಂಟೆಗೆ ಚೀರುವ ಸೌಂಡ್ ಕೇಳಿ ಓಡಿ ಹೋಗಿ ನೋಡಿದಾಗ ಮನೆಯ ಗೋಡೆ ಅವರ ಕಾಲುಗಳ ಮೇಲೆ ಬಿದ್ದಿರುವುದು ಕಂಡು ಭಯವಾಗಿತ್ತು. ಹಿರಿಯರಾದ ಗುರಣ್ಣ ಕಳಸಗೊಂಡ ಹೇಳಿದರು.
ಇದು ಒಂದು ಭಯಾನಕ ದೃಶ್ಯವಾಗಿದೆ. ಗೋಡೆ ಕಡೆ ತೆಲಿಯ ಮಾಡಿ ಮಲಗಿದರೆ ಅವರ ಜೀವಕ್ಕೆ ಅಪಾಯವಿತ್ತು. ದೇವರ ಆಶೀರ್ವಾದದಿಂದ ಯಾವುದೇ ಜೀವಕ್ಕೆ ಅಪಾಯವಾಗಿಲ್ಲ. ಸಾಧ್ಯ ಆದಷ್ಟು ಸರಕಾರದಿಂದ ಪರಿಹಾರ ನೀಡುತ್ತೇನೆ ಎಂದು ಹೇಳಿದರು.
ಧನಪಾಲ ಶೆಟ್ಟಿ
ಆಲಮೇಲ ದಂಡಾಧಿಕಾರಿಗಳು.
ಧಾರಾಕಾರ ಮಳೆಯಿಂದ ಜನರಿಗೆ ಸಾಕಷ್ಟು ತೊಂದರೆವಾಗುತ್ತಿದೆ. ಮಣ್ಣಿನ ಮನೆಗಳು ಇರುವುದರಿಂದ ಗೋಡೆ ಕುಸಿಯುತ್ತವೆ ದೇವರ ದಯದಿಂದ ಯಾವುದೇ ಅಪಾಯವಾಗಿಲ್ಲ.
ಡಾ. ಮಲ್ಲು ಪ್ಯಾಟಿ
ಗ್ಯಾರಂಟಿ ಯೋಜನೆಗಳ ಸದಸ್ಯರು ಕಡಣಿ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 