ಯರಗಟ್ಟಿ 27: ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಕೇಂದ್ರ ಕಛೇರಿ ಚಿತ್ರದುರ್ಗ ರವರ ಆದೇಶದ ಮೇರೆಗೆ ರಾಜ್ಯಾದ್ಯಂತ ಕರ್ತವ್ಯಕ್ಕೆ ಪೌರ ನೌಕರರು ಗೈರು ಕಸ ಸಂಗ್ರಹ, ವಿಲೇವಾರಿ, ಸ್ವಚ್ಛತೆ ನೀರು ಪೂರೈಕೆ, ಒಳಚರಂಡಿ ನಿರ್ವಹಣೆ ಸ್ಥಗಿತ ಮಾಡಿ ಮಂಗಳವಾರ ಪಟ್ಟಣ ಪಂಚಾಯತ ಆವರಣದಲ್ಲಿ ಅನಿರ್ದಿಷ್ಟಾವದಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸದಸ್ಯರು ಅಡಿವೆಪ್ಪ ಇಟಗೌಡರ ಮಾತನಾಡಿ ಸಂಘದ ಬೇಡಿಕೆಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ನವೀನ ಕಣವಿ, ಹಣಮಂತ ಹುಣಸಿಕಟ್ಟಿ, ಉಮರಬೇಗ ಜಮಾದಾರ, ಮೊಮ್ಮದಹನಿಫ ಅತ್ತಾರ, ಶಿವಾಜಿ ಭಜಂತ್ರಿ, ಫಕ್ಕೀರ್ಪ ಚೆನ್ನಮೇತ್ರಿ, ಯಲ್ಲವ್ವ ಚೆನ್ನಮೇತ್ರಿ, ಲಕ್ಷ್ಮೀ ಚೆನ್ನಮೇತ್ರಿ, ಮಂಜುಳಾ ತಳವಾರ, ಸಾಮವ್ವ ಹುಣಸಿಕಟ್ಟಿ, ಮಲ್ಲಪ್ಪ ಬಾರ್ಕಿ, ಮಹಾದೇವಿ ಗುದನಟ್ಟಿ, ಮಾಬುಸುಬಾನಿ ಜಮಾದರ, ಬಸವರಾಜ ಚನ್ನಮೇತ್ರಿ ಸೇರಿದಂತೆ ಅನೇಕರಿದ್ದರು.