ಚಿಂಚಲಿ ಪ. ಪಂ ಮುಖ್ಯಾಧಿಕಾರಿ ನಿಧನ

ಚಿಂಚಲಿ ಪ. ಪಂ ಮುಖ್ಯಾಧಿಕಾರಿ ನಿಧನ Chinchali P.P. Chief Officer passes away

ರಾಯಬಾಗ 22; ತಾಲ್ಲೂಕಿನ  ಚಿಂಚಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ  ವೆಂಕಟಸ್ವಾಮಿ  ಬಳ್ಳಾರಿ (38) ಸೋಮವಾರ ಹೃದಯಘಾತದಿಂದ ಮೃತಪಟ್ಟರು.   

ಕಚೇರಿ ಕೆಲಸದಲ್ಲಿದ್ದಾಗಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಅವರು ಮೃತಪಟ್ಟಿದ್ದಾರೆ.  

ಮೃತರು ತಾಯಿ , ಪತ್ನಿ ,ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ತಾಯಿ ರಾಯಬಾಗ ಪಟ್ಟಣ ಪಂಚಾಯತಿಯಲ್ಲಿ ಪೌರಕಾರ್ಮಿಕರಾಗಿದ್ದಾರೆ. ಮಂಗಳವಾರ ರಾಯಬಾಗ  ಪಟ್ಟಣದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.  ಚಿಕ್ಕೋಡಿ ಉಪವಿಭಾಗಾಧಿಕಾರಿ, ರಾಯಬಾಗ ತಹಶೀಲ್ದಾರ  ಭಾಗವಹಿಸಿದ್ದರು.