ಮಾನ್ಯರ ಮಸಲವಾಡ ವೀರಭದ್ರೇಶ್ವರ ಸ್ವಾಮಿಯ ಸಂಭ್ರಮದ ರಥೋತ್ಸವ

ಮಾನ್ಯರ ಮಸಲವಾಡ ವೀರಭದ್ರೇಶ್ವರ ಸ್ವಾಮಿಯ ಸಂಭ್ರಮದ ರಥೋತ್ಸವ  Chariot festival in celebration of Lord Veerabhadreshwara Swamy, Masalwada

ಹೂವಿನಹಡಗಲಿ 27:  ವೀರಣ್ಣ ದೊರೆಯೇ ನಿನಗಾರು ಸರಿಯೇ.. ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್ ಎನ್ನುವ ಬಹುಪರಾಕ್  ಜಯಘೋಷದ ಮಧ್ಯೆ  ಆರಾಧ್ಯ ದೈವ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ಜಾಮಿ ರಥೋತ್ಸವ ಮಂಗಳವಾರ ಸಂಜೆ 5.30ಕ್ಕೆ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ನಡೆಯಿತು. ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲು  ವಿವಿಧ ಗ್ರಾಮಗಳಿಂದ ಸಹಸ್ರಾರು ಭಕ್ತರು ರಥಕ್ಕೆ ಬಾಳೆ ಹಣ್ಣು ಎಸೆಯುವ ಮೂಲಕ ಭಕ್ತಿ ಸಮರ​‍್ಿಸಿದರು. ಬೆಳಿಗ್ಗೆ ಯಿಂದಲೇ ಸ್ವಾಮಿಯ ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವ ದಲ್ಲಿ ದೇಗುಲ ಕಮಿಟಿ, ಗ್ರಾಮದ ಮುಖಂಡರು ಭಾಗವಹಿಸಿದ್ದರು.