ಯಲಬುರ್ಗಾದಲ್ಲಿ ಚಂದ್ರಹಾಸ ಕನ್ನಡ ಚಲನಚಿತ್ರ ಮೂಹರ್ತಕ್ಕೆ ಚಾಲನೆ

Chandrahasa Kannada movie muhurta launched in Yelaburga

ಯಲಬುರ್ಗಾ 08: ಅಮರ ಶ್ರೀ ಪ್ಲೀಮ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಂದ್ರಹಾಸ ಚಲನಚಿತ್ರ ಮೂಹರ್ತಕ್ಕೆ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ಚಾಲನೆ ನೀಡಿ ಶುಭ ಹಾರೈಯಿಸಿದರು.  

ಪಟ್ಟಣದ ಮೊಗ್ಗಿ  ದೇವಸ್ಥಾನದಲ್ಲಿ ನಡೆದ ಮೂಹರ್ತ ಕಾರ್ಯಕ್ರಮದಲ್ಲಿ ಮೊಗ್ಗಿ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ,ಹೆಸರೆ ಸೂಚಿಸಿದ್ದಂತೆ ಚಂದ್ರಹಾಸ ಚಿತ್ರ ಯಶಸ್ಸು ಕಾಣಲಿ.ಉತ್ತರ ಕರ್ನಾಟಕ ಭಾಗದ ಕಲಾವಿದರಿಗೆ ಅಧ್ಯತೆ ನೀಡುವ ಮೂಲಕ ಈ ಭಾಗದ ಹೆಸರು ತರುತಾಗಲಿ ಎಂದರು.  

ನಂತರ ಬಸವಲಿಂಗಪ್ಪ ಭೂತೆ,ಅಂದಾನಗೌಡ ಉಳ್ಳಾಗಡ್ಡಿ, ವೀರಣ್ಣ ಹುಬ್ಬಳ್ಳಿ, ಐಪಿಎಸ್ ವಿಜಯ ಪ್ರತಾಪ, ಸುಧೀರ ಕೊರ್ಲಳ್ಳಿ ಸೇರಿದಂತೆ ಮತ್ತಿತರರು ಮಾತನಾಡಿದರು.  

ಈ ವೇಳೆ ಡಾ ಶಿವನಗೌಡ ದಾನರೆಡ್ಡಿ,  ಶರಣಪ್ಪ ಗಾಂಜಿ, ಕಲ್ಲನಗೌಡ ಓಜನಹಳ್ಳಿ,  ದಾನನಗೌಡ ತೊಂಡಿಹಾಳ, ನಿರ್ಮಾಪಕ ಬಸವಂತಗೌಡ ಪಾಟೀಲ್, ಕಥೆ,ನಿರ್ದೇಶಕ ಆನಂದ ಕಲಕಬಂಡಿ, ಚಲನಚಿತ್ರ ನಟ,ಕಾಮಿಡಿ ಹರೀಶ ಹಿರಿಯೂರು, ಬಸವಲಿಂಗಪ್ಪ ಕೊತ್ತಲ್,  ಕಳಕಪ್ಪ ತಳವಾರ, ರೇವಣ್ಣೆಪ್ಪ ಹಿರೇಕುರುಬರ, ಮಹೇಶ ಭೂತೆ, ಬಸವರಾಜ ಕಲಕಬಂಡಿ , ಬಸವರಾಜ ಕೊಳ್ಳಿ, ಸೇರಿ ಅನೇಕ ಗಣ್ಯರು ಹಾಗೂ ಕಲಕಬಂಡಿ ಕುಟುಂಬದವರು ಇದ್ದರು.