ಯಲಬುರ್ಗಾದಲ್ಲಿ ಚಂದ್ರಹಾಸ ಕನ್ನಡ ಚಲನಚಿತ್ರ ಮೂಹರ್ತಕ್ಕೆ ಚಾಲನೆ
Chandrahasa Kannada movie muhurta launched in Yelaburga
ಯಲಬುರ್ಗಾ 08: ಅಮರ ಶ್ರೀ ಪ್ಲೀಮ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಂದ್ರಹಾಸ ಚಲನಚಿತ್ರ ಮೂಹರ್ತಕ್ಕೆ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ಚಾಲನೆ ನೀಡಿ ಶುಭ ಹಾರೈಯಿಸಿದರು.
ಪಟ್ಟಣದ ಮೊಗ್ಗಿ ದೇವಸ್ಥಾನದಲ್ಲಿ ನಡೆದ ಮೂಹರ್ತ ಕಾರ್ಯಕ್ರಮದಲ್ಲಿ ಮೊಗ್ಗಿ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ,ಹೆಸರೆ ಸೂಚಿಸಿದ್ದಂತೆ ಚಂದ್ರಹಾಸ ಚಿತ್ರ ಯಶಸ್ಸು ಕಾಣಲಿ.ಉತ್ತರ ಕರ್ನಾಟಕ ಭಾಗದ ಕಲಾವಿದರಿಗೆ ಅಧ್ಯತೆ ನೀಡುವ ಮೂಲಕ ಈ ಭಾಗದ ಹೆಸರು ತರುತಾಗಲಿ ಎಂದರು.
ನಂತರ ಬಸವಲಿಂಗಪ್ಪ ಭೂತೆ,ಅಂದಾನಗೌಡ ಉಳ್ಳಾಗಡ್ಡಿ, ವೀರಣ್ಣ ಹುಬ್ಬಳ್ಳಿ, ಐಪಿಎಸ್ ವಿಜಯ ಪ್ರತಾಪ, ಸುಧೀರ ಕೊರ್ಲಳ್ಳಿ ಸೇರಿದಂತೆ ಮತ್ತಿತರರು ಮಾತನಾಡಿದರು.
ಈ ವೇಳೆ ಡಾ ಶಿವನಗೌಡ ದಾನರೆಡ್ಡಿ, ಶರಣಪ್ಪ ಗಾಂಜಿ, ಕಲ್ಲನಗೌಡ ಓಜನಹಳ್ಳಿ, ದಾನನಗೌಡ ತೊಂಡಿಹಾಳ, ನಿರ್ಮಾಪಕ ಬಸವಂತಗೌಡ ಪಾಟೀಲ್, ಕಥೆ,ನಿರ್ದೇಶಕ ಆನಂದ ಕಲಕಬಂಡಿ, ಚಲನಚಿತ್ರ ನಟ,ಕಾಮಿಡಿ ಹರೀಶ ಹಿರಿಯೂರು, ಬಸವಲಿಂಗಪ್ಪ ಕೊತ್ತಲ್, ಕಳಕಪ್ಪ ತಳವಾರ, ರೇವಣ್ಣೆಪ್ಪ ಹಿರೇಕುರುಬರ, ಮಹೇಶ ಭೂತೆ, ಬಸವರಾಜ ಕಲಕಬಂಡಿ , ಬಸವರಾಜ ಕೊಳ್ಳಿ, ಸೇರಿ ಅನೇಕ ಗಣ್ಯರು ಹಾಗೂ ಕಲಕಬಂಡಿ ಕುಟುಂಬದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 