ಈರುಳ್ಳಿ ರಫ್ತು ನಿಷೇಧಿಸುವಲ್ಲಿ ಕೇಂದ್ರವು ಎಡವಿದೆ: ಎಸ್ಎಸ್ಎಸ್ನ ಶೆಟ್ಟಿ
ಕೊಲ್ಹಾಪುರ 29: ಎಲ್ಲಾ ವಿಧದ ಈರುಳ್ಳಿ
ರಫ್ತು ಮಾಡುವು ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರವು ಎಡವಿದೆ ಎಂದು ಸ್ವಾಭಿಮಾನಿ ಶೆಟ್ಕರಿ ಸಂಘಸ್ಥಾನದ
(ಎಸ್ಎಸ್ಎಸ್) ರಾಷ್ಟ್ರೀಯ ಅಧ್ಯಕ್ಷ ಮತ್ತು ಹಿರಿಯ ಶೆಟ್ಕರಿ ಮುಖಂಡ, ಮಾಜಿ ಸಂಸದ ರಾಜುಶೆಟ್ಟಿ
ಭಾನುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಈರುಳ್ಳಿಯ ಅಂತಾರಾಷ್ಟ್ರೀಯ
ಬೆಲೆಗಳು ಹೆಚ್ಚಾಗಿದೆ ಮತ್ತು ದೇಶೀಯ ಮಾರುಕಟ್ಟೆಯಲ್ಲಿಯೂ ಸಹ ಬೆಲೆ ಹೆಚ್ಚಾಗಿದೆ, ತರಕಾರಿ ರಫ್ತಿಗೆ
ನಿಷೇಧ ಹೇರುವ ಮೂಲಕ ಸರ್ಕಾರವು ತಪ್ಪೆಸಗಿದೆ" ಎಂದು ಹೇಳಿದರು.
ಮುಂದಿನ ತಿಂಗಳು ಬರಲಿರುವ 'ಖಾರಿಫ್' ಬೆಳೆ ಪರಿಗಣಿಸಿ ಈರುಳ್ಳಿ
ರಫ್ತು ನಿಷೇಧಿಸುವ ಈ ನಿರ್ಧಾರವು ಈರುಳ್ಳಿ ಬೆಳೆಗಾರರಿಗೆ ತೀವ್ರ ಪರಿಣಾಮ ಬೀರುತ್ತದೆ ಎಂದು ಶೆಟ್ಟಿ
ಅಭಿಪ್ರಾಯಪಟ್ಟರು.
ಸರ್ಕಾರದ ನಿಷೇಧದ ನಿರ್ಧಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ
ಅವರು, ಸರ್ಕಾರವು ರೈತರ ಆರ್ಥಿಕ ಹಿತಾಸಕ್ತಿಗೆ ಒಳಪಡದಂತಹ ನಿರ್ಧಾರವನ್ನು ಏಕೆ ತೆಗೆದುಕೊಂಡಿತು ಎಂದು
ಪ್ರಶ್ನಿಸಿದರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್
ಮತ್ತು ಇತರ ಸಚಿವರು ಭಾನುವಾರ ತೆರೆದ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಈರುಳ್ಳಿಯ ಬೆಲೆಯನ್ನು ನಿಯಂತ್ರಣಕ್ಕೆ
ತರಲು ತಕ್ಷಣವೇ ಜಾರಿಗೆ ಬರುವಂತೆ ಎಲ್ಲಾ ಬಗೆಯ ಈರುಳ್ಳಿಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 