ಪ್ರಾಥಮಿಕ ಕೃಷಿ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮ

Centenary celebration program of Primary Agricultural Cooperative Society

ಕಾಗವಾಡ, 07 : ಸಹಕಾರ ಚಳುವಳಿಗೆ ಸುಮಾರು 120 ವರ್ಷಗಳ ಇತಿಹಾಸವಿದ್ದು, ದೇಶದ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದೆ, ದೇಶದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಸಹಕಾರಗಳು ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು  80 ಸಾವಿರ ಕೋಟಿ ರೂ. ಗಳ ಠೇವಣಿಯೊಂದಿಗೆ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳು ನೀಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ. ಅವರು, ಶನಿವಾರ ದಿ. 07 ರಂದು  ತಾಲೂಕಿನ ಉಗಾರ ಬುದ್ರುಕ್ ಗ್ರಾಮದ ವಿವಿದೊದ್ದೇಶಗಳ ಪ್ರಾಥಮಿಕ ಕೃಷಿ ಸಹಕಾರ ಸಂಘದ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಅವಿಭಾಜಿತ ಅಥಣಿ ತಾಲೂಕಿನಲ್ಲಿ 154 ಸಹಕಾರ ಸಂಘಗಳಿದ್ದು, ನೂರಕ್ಕೆ ನೂರು ವಸೂಲಾತಿ ಇದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಸಹಕಾರ ಕ್ಷೇತ್ರದಲ್ಲಿ ಈ ಸಹಕಾರಿಯ ಅಧ್ಯಕ್ಷ ಶೀತಲ ಪಾಟೀಲ ಅವರು ಮಾಡಿರುವ ಸಾಧನೆ ಅಮೋಘವಾಗಿದೆ ಎಂದರು.  

ಶಾಸಕ ರಾಜು ಕಾಗೆ ಮಾತನಾಡಿ, ಸಹಕಾರ ಸಂಘಗಳು  ಮೋಜಿನ ವಸ್ತುಗಳನ್ನು ಖರಿದಿಸುವವರಿಗೆ ಸಾಲ ನೀಡದೆ  ಗುಡಿ ಕೈಗಾರಿಕೆ ಮಾಡುವವರಿಗೆ ಸಾಲ ನೀಡಿದರೆ ವಸೂಲಾತಿಗೆ ಅನುಕೂಲವಾಗುತ್ತದೆ ಎಂದರು..ಸಾನಿಧ್ಯವನ್ನು ಶ್ರೀ ಕ್ಷೇತ್ರ ಕನಕಗಿರಿಯ ಪ.ಪೂ.ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿ, ಪ.ಪೂ. ಸ್ವಸ್ತಿಶ್ರೀ ಧವಲಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿ, ಪ.ಪೂ.ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿ, ಪ.ಪೂ. ಸ್ವಸ್ತಿಶ್ರೀ ಜಗದ್ಗುರುಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿ, ಪ.ಪೂಸ್ವಸ್ತಿಶ್ರೀ ಧವಲಕೀರ್ತಿ ಭಟ್ಟಾರಕ  ಪಟ್ಟಾಚಾರ್ಯ ಮಹಾಸ್ವಾಮಿಜಿ ,ಪ.ಫೂ.ಶ್ರೀ ಯತೀಸ್ವರಾನಂದ ಮಹಾಸ್ವಾಮಿಗಳು, ಪ.ಪೂ.ಶ್ರೀ ಅಮರೇಶ್ವರ ಮಹಾಸ್ವಾಮಿಗಳು, ಹ.ಬ.ಪ.ಶ್ರೀ ಆನಂದರಾವ್ ಅಪ್ಪಾಸಾಹೇಬ ಜಾಧವ ಮಹಾರಾಜರು ವಹಿಸಿದ್ದರು.  

ಅತಿಥಿಗಳಾಗಿ ಮಾಜಿ ಶಾಸಕ ಮೋಹನ್ ಶಹಾ, ಡಿಸಿಸಿ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಶಿವಪುತ್ರ ಬಾಗೇವಾಡಿ, ಡಿಸಿಸಿ ಬ್ಯಾಂಕಿನ ತಾಲೂಕಾ ನಿಯಂತ್ರಣಾಧಿಕಾರಿ ಶಂಕರ ನಂದೇಶ್ವರ ಬ್ಯಾಂಕ ನೀರೀಕ್ಷಕ ಶಿವಾನಂದ ಬುರುಡ, ನೂತನ ಕಟ್ಟಡದ ಇಂಜನೀಯರ ಆದಿನಾಥ ವಸವಾಡೆ, ಮುಖಂಡರಾದ ಕೆ.ಎ.ವನಜೋಳ, ರಾಜು ನಾಡಗೌಡ, ಅಭಯಕುಮಾರ ಅಕಿವಾಟೆ, ರವೀಂದ್ರ ಪೂಜಾರಿ, ಮುಕುಂದ ಪೂಜಾರಿ, ಅಮರ ದುರ್ಗನ್ನವರ, ಸಿದ್ದಪ್ಪ ಕನಾಳೆ, ಸುಭಾಷ ಪಾಟೀಲ(ಕಿತ್ತೂರ) ಸೇರಿದಂತೆ ಅನೇಕರು ಉಪಸ್ಥಿತರಿರುವರು.