ಆರಾಧ್ಯ ದೈವ ತುರುಮುಂದಿ ಬಸವೇಶ್ವರರ ಮಹಾರಥೋತ್ಸವದ ಸಂಭ್ರಮ
Celebration of the Maharathotsava of the revered deity Turumundi Basaveshwara
ಲೋಕದರ್ಶನ ವರದಿ
ಕಂಪ್ಲಿ 21: ತಾಲ್ಲುಕಿನ ದೇವಸಮುದ್ರ ಗ್ರಾಮದಲ್ಲಿ ಗ್ರಾಮದ ಅರಾಧ್ಯದೇವರಾದ ಶ್ರೀ ತುರುಮುಂದಿ ಬಸವೇಶ್ವರ ಮಹಾರಥೋತ್ಸವವು ಬಸವೇಶ್ವರರ ಜಯಂತಿಯ ದಿನದಂದು ಸಂಜೆ ಸಡಗರ, ಸಂಭ್ರಮ, ಶ್ರದ್ದಾಭಕ್ತಿಯಿಂದ ಜರುಗಿತು. ಮಹಾರಥೋತ್ಸವದ ಅಂಗವಾಗಿ ಏ.19 ರಂದು ಕಳಸ, ಕುಂಭಗಳೊಂದಿಗೆ, ಗಂಗೆಸ್ಥಳ ಕಾರ್ಯಕ್ರಮವು ವೀರಗಾಸೆ, ಪುರವಂತರ ನೃತ್ಯ ಜರುಗಿತು. ನಂತರ ಶ್ರೀತುರುಮುಂದಿ ಬಸವೇಶ್ವರ ಮತ್ತು ನೀಲಮ್ಮ ತಾಯಿಯ ಕಲ್ಯಾಣೋತ್ಸವವು ಸಂಭ್ರಮದಿಂದ ಜರುಗಿತು. ಸೋಮವಾರ ಬೆಳಿಗ್ಗೆ ತುರುಮುಂದಿ ಬಸವೇಶ್ವರರ ಶಿಲಾಮೂರ್ತಿಗೆ ವಿವಿಧ ಅಭಿಷೇಕ, ಮಹಾಮಂಗಳಾರತಿ ಹಾಗೂ ಮಡಿತೇರನ್ನು ಎಳೆಯಲಾಯಿತು. ಸಂಜೆ ಮಂಗಲವಾದ್ಯಗಳು, ವಿವಿದ ಜಾನಪದ ಕಲಾತಂಡಗಳೊಂದಿಗೆ ಉತ್ಸವ ಮೂರ್ತಿಗಳಾದ ತುರುಮುಂದಿ ಬಸವೇಶ್ವರ ಮತ್ತು ನೀಲಮ್ಮ ತಾಯಿಯ ಪ್ರತಿಮೆಗಳನ್ನು ಮೆರವಣಿಗೆ ಮೂಲಕ ತಂದು ರಥದಲ್ಲಿಪ್ರತಿಪಷ್ಠಾಪಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಹಾರಥೋತ್ಸವದಲ್ಲಿ ಶಾಸಕ ಜೆ.ಎನ್.ಗಣೇಶ್ ಭಾಗವಹಿಸಿ ಸ್ವಾಮಿ ಆರ್ಶೀವಾದ ಪಡೆದರು. ಮಹಾರಥೋತ್ಸವದಲ್ಲಿ ಗ್ರಾಮದ ಮುಖಂಡರಾದ ಜಿ.ಲಿಂಗನಗೌಡ, ಅಳ್ಳಳ್ಳಿ ವಿರೇಶ್, ಜಿ.ಚಂದ್ರಶೇಖರಗೌಡ, ಜಿ.ಮಲ್ಲಿಗೌಡ, ಬಸವನಗೌಡ, ಜಿ.ಗಣೇಶಗೌಡ, ಕಡೇಮನಿ ಪಂಪಾಪತಿ, ಜಿ.ವೀರನಗೌಡ, ಅಮರೇಗೌಡ, ಚನ್ನವೀರ, ಬಸವ, ಮುತ್ತಯ್ಯ, ಚಿದಾನಂದಪ್ಪ , ಪುರೋಹಿತರಾದ ಗುರುತಾತ, ಬಸವೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ವಿವಿದ ಸಮಾಜದ ಮುಖಂಡರು ಭಾಗವಹಿಸಿದ್ದರು. ರಾತ್ರಿ ತುರುಮುಂದಿ ಬಸವೇಶ್ವರ ದೇವಸ್ಥಾನಕ್ಕೆ ಚಿಕ್ಕೆನಕೊಪ್ಪದ ಶಿವಶಾಂತವೀರ ಶರಣರು ಆಗಮಿಸಿ ಗ್ರಾಮದ ಭಕ್ತರಿಗೆ ಶುಭ ಆರ್ಶೀವಚನ ದಯಪಾಲಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 