ಬೆಳ್ಳಂಬೆಳಗ್ಗೆ ಯಮರಾಯನ ಅಟ್ಟಹಾಸ: ವಾಕಿಂಗ್ ಮಾಡುವವರ ಮೇಲೆ ಹರಿದ ಕಾರು: ಇಬ್ಬರ ಸಾವು ಒಬ್ಬರಿಗೆ ಗಂಭೀರ ಗಾಯ

ಬೆಳ್ಳಂಬೆಳಗ್ಗೆ ಯಮರಾಯನ ಅಟ್ಟಹಾಸ: ವಾಕಿಂಗ್ ಮಾಡುವವರ ಮೇಲೆ ಹರಿದ ಕಾರು: ಇಬ್ಬರ ಸಾವು ಒಬ್ಬರಿಗೆ ಗಂಭೀರ ಗಾಯ  Car runs over pedestrians: Two dead, one seriously injured

ವರದಿ: ವೀರಣ್ಣ ಹಡಪದ

ಗದಗ 29: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಘಟನೆ ಹುಬ್ಬಳ್ಳಿ ರಸ್ತೆಯಲ್ಲಿರುವ ಚೆನ್ನಮ್ಮ ಕಾಲೇಜ್ ಬಳಿ ನಡೆದಿದೆ. 

ಮುಂಜಾನೆ ಎದ್ದು ಎಂದಿನಂತೆ ವಾಕಿಂಗ್ ಹೋಗಿದ್ದ ಮೂವರಿಗೆ ಲಕ್ಷ್ಮೇಶ್ವರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟ್ಟಿದ್ದ ಕಾರು ಡಿಕ್ಕಿ ಹೊಡೆದು ಶಿವಾನಂದ ಹುಲಕೋಟಿ, ಅಶೋಕ ಸರವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಮ್ ಎಸ್ ಚಾಕಲಬಿ ಎಂಬುವವನಿಗೆ ಗಂಭೀರ ಗಾಯಗಳಾಗಿವೆ.ಗಾಯಾಳುವನ್ನು ಜಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸ್‌ರು ಭೇಟಿ ನೀಡಿ ಪರೀಶೀಲನೆ ನಡೆಸಿದರು.