ಕಾಲುವೆ ನೀರು ಜಮೀನುಗಳಿಗೆ ನುಗ್ಗಿ ತೋಗರಿ ಬೆಳೆ ಹಾನಿ

ಕಾಲುವೆ ನೀರು ಜಮೀನುಗಳಿಗೆ ನುಗ್ಗಿ ತೋಗರಿ ಬೆಳೆ ಹಾನಿ Canal water floods farmlands, damaging the red gram crop

ದೇವರಹಿಪ್ಪರಗಿ 27 : ತಾಲ್ಲೂಕಿನ ಸಾತಿಹಾಳ ಗ್ರಾಮದ  ಸಮೀಪವಿರುವ ವಿಜಯಪುರ ಮೇನ್ ಕಾಲುವೆಯ  ಉಪಕಾಲುವೆ ಒಡೆದು ನೀರು ಕೃಷಿ ಜಮೀನುಗಳಿಗೆ ನುಗ್ಗಿ ತೋಗರಿ ಬೆಳೆ ಹಾನಿಗೊಳಗಾದ ಘಟನೆ ಗುರುವಾರ ನಡೆದಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಬೆಳೆ ಹಾನಿಗೆ ಕಾರಣ ಎಂದು ರೈತರು ಆರೋಪಿಸಿದ್ದಾರೆ. ಪಟ್ಟಣದ ಸ.ನಂ-109/2 ರೈತರಾದ ಮಾಂತೇಶ ಪರ​‍್ಪ ಅವಟಿ ಹಾಗೂ ನಿಂಗಪ್ಪ ಸತ್ಯಪ್ಪ ಅವಟಿ ಅವರ ಸುಮಾರು 17 ಎಕರೆ ಜಮೀನಿನಲ್ಲಿ 10ಎಕರೆ ಜಮೀನ ತೊಗರಿ ಬೆಳೆಯಲಾಗಿತ್ತು. ಕಾಲುವೆ ಕಳಪೆ ಕಾಮಗಾರಿ  ಹಿನ್ನೆಲೆಯಲ್ಲಿ ನೀರು ಕಾಲುವೆಯಿಂದ ಹೊರಹೊಮ್ಮಿ ಕೃಷಿ ಜಮೀನುಗಳಿಗೆ ನುಗ್ಗಿದೆ.

ಪರಿಣಾಮವಾಗಿ ಸುಮಾರು 5 ಎಕರೆ ತೋಗರಿ ಬೆಳೆ ನಾಶವಾಗಿದೆ. ಮೊದಲೇ ಬರಗಾಲದಿಂದ ತತ್ತರಿಸಿದ ರೈತರಿಗೆ ಬರ ಸಿಡಿಲು ಬಡಿದಂತಾಗಿದೆ. ರೈತರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬೆಳೆದಿದ್ದ ಬೆಳೆ ನೀರಿನಿಂದ ಹಾನಿಯಾಗಿದೆ. ಕೆಬಿಜೆಎನ್‌ಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಾನಿಗೊಳಗಾದ ಬೆಳೆಗಳ ತಕ್ಷಣ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವ ಮುಖಂಡರಾದ ಮಹೇಶ ಅವಟಿ ಹಾಗೂ ರೈತರು ಒತ್ತಾಯಿಸಿದರು.