ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ ಬಲಪಡಿಸಲು ಕರೆ

 ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ ಬಲಪಡಿಸಲು ಕರೆ Call to strengthen party organization in view of elections

ಮಹಾಲಿಂಗಪುರ    13: ರಾಜ್ಯ ರಾಜಕೀಯದಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾದ ಶಿವಾನಂದ ಪಾಟೀಲ ಮತ್ತು ಲಕ್ಷ್ಮಣ ಸವದಿ ಅವರಿಗೆ ಮುಂಬರುವ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂಬ ಕೂಗು ಬಲವಾಗಿದೆ. ಮಹಾಲಿಂಗಪುರ ಮಾಜಿ ಪುರಸಭೆಯ ಅಧ್ಯಕ್ಷ ಬಸವರಾಜ ರಾಯರಯವರು ಹೇಳಿದ್ದರು. 

ನಾಯಕರ ಪ್ರಭಾವ ಮತ್ತು ರಾಜಕೀಯ ಮಹತ್ವ:  ಶಿವಾನಂದ ಪಾಟೀಲ (ವಿಜಯಪುರ ಜಿಲ್ಲೆ) ಮತ್ತು ಲಕ್ಷ್ಮಣ ಸವದಿ (ಬೆಳಗಾವಿ ಜಿಲ್ಲೆ, ಅಥಣಿ) ಅವರು ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದ ಅತ್ಯಂತ ಪ್ರಭಾವಶಾಲಿ ಮುಖಂಡರೆಂದು ಗುರುತಿಸಿಕೊಂಡಿದ್ದಾರೆ.ಈ ಇಬ್ಬರೂ ನಾಯಕರು ದಶಕಗಳ ರಾಜಕೀಯ ಅನುಭವವನ್ನು ಹೊಂದಿದ್ದು, ತಮ್ಮದೇ ಆದ ಬೆಂಬಲಿಗರ ಪಡೆಯನ್ನು ಹೊಂದಿದ್ದಾರೆ. ಸ್ಥಳೀಯ ಮಟ್ಟದಲ್ಲಿನ ಅವರ ವರ್ಚಸ್ಸು ಮತ್ತು ಜನಬೆಂಬಲವನ್ನು ಪರಿಗಣಿಸಿ,ಅವರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನ ಕಲ್ಪಿಸುವುದು ಪಕ್ಷದ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯ ಎಂದು ಬಸವರಾಜ ರಾಯರ ಅಭಿಪ್ರಾಯಪಟ್ಟಿದ್ದಾರೆ. 

2028ರ ಚುನಾವಣಾ ಸಿದ್ಧತೆ ಮತ್ತು ಪಕ್ಷದ ವರ್ಚಸ್ಸು: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಶೋಕ ಜೆ .ಅಂಗಡಿ, "2028ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರುವ ಗುರಿಯನ್ನು ಹೊಂದಲಾಗಿದೆ.ಉತ್ತರ ಕರ್ನಾಟಕದಲ್ಲಿ ಪಕ್ಷದ ನೆಲೆ ಗಟ್ಟಿಯಾಗಿರಬೇಕಾದರೆ,ಶಿವಾನಂದ ಪಾಟೀಲ ಮತ್ತು ಲಕ್ಷ್ಮಣ ಸವದಿ ಅವರಂತಹ ಅನುಭವಿ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದರಿಂದ ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳುತ್ತವೆ ಮತ್ತು ಪಕ್ಷಕ್ಕೆ ಬಲ ಬರುತ್ತದೆ," ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಸವರಾಜ ಘಟ್ನಟ್ಟಿ, ಮಲ್ಲಣ್ಣ ಕುಳ್ಳೊಳ್ಳಿ, ಮಹಾದೇವ ಕಡಬಲ್ಲವರ, ಮಲ್ಲು ಪಚ್ಚಾಪುರ, ಬಸವರಾಜ ಕಲಾದಗಿ, ಶಿವಾನಂದ ಗೋಕಾವಿ ,ಬಸವರಾಜ ಕರೆಹೊನ್ನ, ಸಂದೀಪ ಧೂಳನ್ನವರ, ಶ್ರೀಶೈಲಗೌಡ ಪಾಟೀಲ, ಲಕ್ಷ್ಮಣ ಭಜಂತ್ರಿ, ಶಿವಾನಂದ ನಾಗರಾಳ, ಸಯ್ಯದ ಶೇಖ, ಆಫ್ರಿದಿ ಪಕಾಲಿ, ಯಾಸೀನ ಪಾಂಡು, ಇಜಾಜ ಯಾದವಾಡ, ಸಿಕಂದರ ಸಾಂಗ್ಲಿಕರ , ಮಹಾಂತೇಶ ಘಟ್ನಟ್ಟಿ, ಡಾ. ಆಲಬಾಳ, ಮಹಾಲಿಂಗ ಇಂಗಳಗಿ, ರಮೇಶ ಹರಕಂಗಿ, ಕುಮಾರ ನಾಯಕ, ಪರಶುರಾಮ ಪಾತ್ರೋಟ, ಹಣಮಂತ ಬಂಡಿವಡ್ಡರ ಮತ್ತು ಮಲ್ಲುರಾಮೋಜಿ, ಸೇರಿದಂತೆ ಇತರರಿದ್ದರು.