ಐಪಿಎಲ್ ವಿರುದ್ಧ ಸಿಪಿಎಲ್ ಹೋರಾಟ ಮಾಡದು: ಪೀಟ್ ರಸೆಲ್
ನವದೆಹಲಿ, ಏ 18,ಪೂರ್ವ ನಿಗದಿಯಂತೆ ಮುಂಬರುವ ಸೆಪ್ಟೆಂಬರ್ ನಲ್ಲಿ ಟಿ20 ಲೀಗ್ ನಡೆಯಲಿದೆ ಎಂದು ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೀಟ್ ರಸೆಲ್ ನಿರೀಕ್ಷಿಸಿದ್ದಾರೆ. ಹಾಗೆಯೇ ಕೊರೊನಾ ವೈರಸ್ ನಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿರುವ ಐಪಿಎಲ್ ಕುರಿತು ಬಿಸಿಸಿಐ ತನ್ನದೇ ಆದ ವಿಂಡೋ(ಪರ್ಯಾಯ ಮಾರ್ಗ) ವನ್ನು ಕಲ್ಪಿಸಲಿದೆ ಎಂದು ಆಶಿಸಿದ್ದಾರೆ.ಕೋವಿಡ್ -19ನಿಂದಾಗಿ ಐಪಿಎಲ್ 13ನೇ ಆವೃತ್ತಿ ಅಮಾನತುಗೊಂಡಿರುವ ಕಾರಣ ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಚಿಂತಿಸುತ್ತಿದೆ. ಇದಕ್ಕಾಗಿ ಏಷ್ಯಾ ಕಪ್ ಮತ್ತು ಟಿ20 ವಿಶ್ವ ಕಪ್ ವೇಳಾಪಟ್ಟಿಯಲ್ಲಿಯೂ ಬದಲಾವಣೆ ತರಬೇಕಿದೆ. ಆಗಸ್ಟ್ 19ರಿಂದ ಸೆಪ್ಟೆಂಬರ್ 26ರವರೆಗೆ ನಿಗದಿಯಾಗಿರುವ ಸಿಪಿಎಲ್ ಐಪಿಎಲ್ ವೇಳಾಪಟ್ಟಿಗೆ ತಾಕಲಾಟ ಉಂಟು ಮಾಡಬಹುದಾಗಿದೆ. ಹೀಗಾಗಿ ಈ ಕುರಿತು ಕ್ರಿಕ್ ಇನ್ಫೋ ಜತೆ ಪ್ರತಿಕ್ರಿಯಿಸಿರುವ ಸಿಪಿಎಲ್ ಸಿಇಒ, ಇದರ ವಿರುದ್ಧ ನಾವು ಹೋಗುವುದಿಲ್ಲ. ಇದೇ ವೇಳೆ ಈ ಕುರಿತು ನಿರ್ಧಾರ ಕೈಗೊಳ್ಳಲು ಬಿಸಿಸಿಐ ಎಲ್ಲ ರೀತಿಯಲ್ಲೂ ಸರ್ವಶಕ್ತವಾಗಿದೆ ಎಂದು ನನಗೆ ತಿಳಿದಿದ್ದರೂ ಸ್ವಲ್ಪ ಸಂವೇದನಾಶೀಲರಾಗಿರಬೇಕು, ಆಟಗಾರರು ಹಾಗೂ ಇತರ ಲೀಗ್ ಗಳು ಏನೂ ಮಾಡುತ್ತಿವೆ ಎಂಬುದನ್ನು ಪರಿಗಣಿಸಬೇಕು, ಎಂದು ರಸೆಲ್ ಹೇಳಿದ್ದಾರೆ.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 