ಶಿರಹಟ್ಟಿ ತಾಲೂಕಿಗೆ ಸಿಇಓ ಭರತ್‌ಎಸ್ ಭೇಟಿ: ಜೆಜೆಎಂನ ಕಾಮಗಾರಿ ಪರೀಶೀಲನೆ

ಶಿರಹಟ್ಟಿ ತಾಲೂಕಿಗೆ ಸಿಇಓ ಭರತ್‌ಎಸ್ ಭೇಟಿ: ಜೆಜೆಎಂನ ಕಾಮಗಾರಿ ಪರೀಶೀಲನೆ CEO BharatS visit to Shirahatti taluk: Review work of JJM

ಶಿರಹಟ್ಟಿ ತಾಲೂಕಿಗೆ ಸಿಇಓ ಭರತ್‌ಎಸ್ ಭೇಟಿ: ಜೆಜೆಎಂನ ಕಾಮಗಾರಿ ಪರೀಶೀಲನೆ 

ಶಿರಹಟ್ಟಿ   31 : ಕಳೆದ ಮೂರು-ನಾಲ್ಕು ದಿನಗಳಿಂದ ಜಿಲ್ಲಾದ್ಯಂತ ಬಿಡುವಿಲ್ಲದ ಸಂಚಾರ ನಡೆಸಿರುವ ಜಿಲ್ಲಾ ಪಂಚಾಯಿತಿ ಸಿಇಒ ಭರತ್‌ಎಸ್ ಸರ್ಕಾರದ ವಿವಿಧ ಕಾಮಗಾರಿಗಳು, ಯೋಜನೆಗಳ ಅನುಷ್ಟಾನ ಹಾಗೂ ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ಪರೀಶೀಲನೆ ನೆಡೆಸಿದರು.ಗುರುವಾರ ಅವರು ಶಿರಹಟ್ಟಿ ತಾಲೂಕು ಮಜ್ಜುರ ಹಾಗೂ ಮಾಚೇನಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜಲ ಜೀವನ್ ಮಿಷನ್‌ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳನ್ನು ಪರೀಶೀಲಿಸಿ ನೆಡೆಸಿದರು.  

ಈ ಹಿನ್ನೆಲೆಯಲ್ಲಿ ಮಜ್ಜುರ, ಶಿವಾಜಿ ತಾಂಡಾ,  ಮಾಚೇನಹಳ್ಳಿ, ತೆಗ್ಗಿನ ಭಾವನೂರ, ನವೆಭಾವನೂರ ಗ್ರಾಮಗಳಿಗೆ ಅನೀರೀಕ್ಷಿತ ಭೇಟಿ ನೀಡಿ, ಜೆಜೆಎಂ ಕಾಮಗಾರಿಗಳು,ಸಂಪರ್ಕಗಳ ಗುಣಮಟ್ಟ, ಮೀಟರ್ ಅಳವಡಿಕೆ, ರಸ್ತೆ ಪುನಶ್ಚೇತನ, ನೀರಿನಗುಣಮಟ್ಟ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ ಕಾರ್ಯ ನಿರ್ವಹಣೆಕುರಿತು ವಿವರವಾದ ಪರೀಶೀಲನೆ ನಡೆಸಿದರು. ಇದೆ ಸಂದರ್ಭದಲ್ಲಿ ಮನೆ ಮನೆಗಳಿಗೆ ಅಳವಡಿಸಲಾಗಿರುವ ನಳಗಳ ಸಂರ​‍್ಕ ಬಗ್ಗೆ ಫಲಾನುಭವಿಗಳೊಂದಿಗೆ ಚರ್ಚೆ ಮಾಡಿದರು.ಗ್ರಾಮಗಳ ಭೇಟಿ ವೇಳೆ ,ಗುಣಮಟ್ಟದಕಾಮಗಾರಿ ಕೈಗೊಳ್ಳುವಲ್ಲಿ ಅಧಿಕಾರಿಗಳು ಮತ್ತುಗುತ್ತಿಗೆದಾರರಜವಾಬ್ದಾರಿಎಷ್ಟಿದೆಯೋಕಾಮಗಾರಿಗುಣಮಟ್ಟ ಕಾಪಾಡಿಕೊಳ್ಳುವುದು, ಸದುಪಯೋಗ ಪಡೆದುಕೊಳ್ಳುವ ಜವಾಬ್ದಾರಿ ಸಾರ್ವಜನಿಕರ ಮೇಲೂ ಇದೆ. ಹೀಗಾಗಿ ಸಾರ್ವಜನಿಕರು ಸರ್ಕಾರದ ಭಾಗವಾಗಿ ಜವಾಬ್ದಾರಿಗಳನ್ನು ನಿಭಾಯಿಸಬೇಕು ಕಾಮಗಾರಿಗಳು ಗುಣನುಟ್ಟದಿಂದಆಗುವಂತೆ ನೋಡಿಕೊಳ್ಳಬೇಕಲ್ಲದೇ ಪೂರ್ಣಗೊಂಡಿರುವ ಕಾಮಗಾರಿಗಳಿಂದ ಸದುಪಯೋಗ ಪಡೆದುಕೊಳ್ಳಬೆಕೇಂದರು.ಈ ಭೇಟಿಯಲ್ಲಿ ಶಿರಹಟ್ಟಿ ತಾಲೂಕ ಪಂಚಾಯತಕಾರ್ಯನಿರ್ವಾಹಕಅಧಿಕಾರಿರಾಮಣ್ಣದೊಡ್ಡಮನಿ, ಗ್ರಾಮೀಣಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಕಾರ್ಯಪಾಲಕಎಂಜಿನಿಯರ್‌ರಾಘವೇಂದ್ರದೊಡ್ಡಮನಿ, ಸಹಾಯಕಎಂಜಿನಿಯರ್ ಮಲ್ಲಿಕಾರ್ಜುನ ಪಾಟೀಲ, ವಿಭಾಗೀಯಅಧಿಕಾರಿ ಮುನ್ನಿ ಹರಕುನಿ, ಗ್ರಾಮ ಪಂಚಾಯತ್‌ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.