ಮಹಾದೇವ್ ಆಪ್ ಬೆಟ್ಟಿಂಗ್ ಸಿಂಡಿಕೇಟ್ ಪ್ರಕರಣದಲ್ಲಿ ಸಿಬಿಐ ೧೧ ಆರೋಪಪಟ್ಟಿ ಸಲ್ಲಿಕೆ
CBI Files 11 Charge Sheets in Mahadev App Betting Syndicate Case
**ನವದೆಹಲಿ, ಜುಲೈ ೯ (UಓI)** ಮಹಾದೇವ್ ಆಪ್ ಬೆಟ್ಟಿಂಗ್ ಸಿಂಡಿಕೇಟ್ ಪ್ರಕರಣಕ್ಕೆ ಸಂಬAಧಿಸಿದAತೆ ಕೇಂದ್ರೀಯ ತನಿಖಾ ದಳ (ಅಃI) ಗುರುವಾರ ೧೧ ಆರೋಪಪಟ್ಟಿಗಳನ್ನು ಸಲ್ಲಿಸಿದೆ. ಇದರಲ್ಲಿ ಆರು ಆರೋಪಪಟ್ಟಿಗಳು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬAಧಿಸಿದವುಗಳಾಗಿದ್ದು, ಉಳಿದ ಐದು ಆರೋಪಪಟ್ಟಿಗಳು ಅಕ್ರಮ ಆನ್ಲೈನ್ ಬೆಟ್ಟಿಂಗ್ ಜಾಲಕ್ಕೆ ಸಂಬAಧಿಸಿದ ಪ್ರತ್ಯೇಕ ಪ್ರಕರಣಕ್ಕೆ ಸೇರಿವೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ, ಆಶಿಮ್ ದಾಸ್, ರೋಹಿತ್ ಗುಲಾಟಿ, ವಿಕಾಸ್ ಛಾಪಾರಿಯಾ, ಅನಿಲ್ ಧಮ್ಮಾಣಿ, ವಿಶಾಲ್ ಅಹುಜಾ ಮತ್ತು ಧೀರಜ್ ಅಹುಜಾ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಇವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ, ೧೯೮೮ರ ಅಡಿಯಲ್ಲಿ ಹಾಗೂ ಭಾರತೀಯ ದಂಡ ಸಂಹಿತೆ (IPಅ)ಯ ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಅಪರಾಧ ಸಂಚು ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಈಗಾಗಲೇ ಆರೋಪಪಟ್ಟಿ ಎದುರಿಸುತ್ತಿರುವ ಸಿಂಡಿಕೇಟ್ನ ಪ್ರಮುಖ ಆರೋಪಿಗಳೆಂದು ಹೇಳಲಾಗಿರುವ ಸೌರಭ್ ಚಂದ್ರಾಕರ್ ಮತ್ತು ರವಿ ಉಪ್ಪಲ್ ವಿರುದ್ಧ ಸಿಬಿಐ ಹೆಚ್ಚುವರಿ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಮಹಾದೇವ್ ಆಪ್ಗೆ ಸಂಬAಧಿಸಿದ ಎರಡನೇ ಪ್ರಕರಣದಲ್ಲಿ, ಸಿಬಿಐ ೬೬ ಆರೋಪಿಗಳ ವಿರುದ್ಧ ಐದು ಆರೋಪಪಟ್ಟಿಗಳನ್ನು ಸಲ್ಲಿಸಿದೆ. ಇದರಲ್ಲಿ ಚಂದ್ರಾಕರ್, ಉಪ್ಪಲ್ ಹಾಗೂ ಅಕ್ರಮ ಹಣವನ್ನು ವರ್ಗಾಯಿಸಲು ಬಳಸಲಾಗಿದೆ ಎಂದು ಆರೋಪಿಸಲಾಗಿರುವ ವಿವಿಧ ಬೆಟ್ಟಿಂಗ್ ಪ್ಯಾನೆಲ್ಗಳ ಸದಸ್ಯರು ಸೇರಿದ್ದಾರೆ. ಈ ಆರೋಪಪಟ್ಟಿಗಳಲ್ಲಿ ಭಾರತೀಯ ದಂಡ ಸಂಹಿತೆ (IPಅ) ಮತ್ತು ಛತ್ತೀಸ್ಗಢ ಜೂಜಾಟ ನಿಷೇಧ ಕಾಯ್ದೆಯ ವಿವಿಧ ಸೆಕ್ಷನ್ಗಳನ್ನು ಉಲ್ಲೇಖಿಸಲಾಗಿದೆ.
ಸಿಬಿಐ ಪ್ರಕಾರ, ಮಹಾದೇವ್ ಆಪ್ ಭಾರತದಲ್ಲಿ ಪತ್ತೆಯಾದ ಅತಿದೊಡ್ಡ ಅಕ್ರಮ ಆನ್ಲೈನ್ ಬೆಟ್ಟಿಂಗ್ ಜಾಲಗಳಲ್ಲಿ ಒಂದಾಗಿದೆ. ತನಿಖೆಯಲ್ಲಿ, ಇದರ ಪ್ರವರ್ತಕರಾದ ಸೌರಭ್ ಚಂದ್ರಾಕರ್ ಮತ್ತು ರವಿ ಉಪ್ಪಲ್ ವಿದೇಶದಿಂದ ಈ ಜಾಲವನ್ನು ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಾಂತರ ಬಳಕೆದಾರರನ್ನು ತಲುಪಿ, ದೇಶಾದ್ಯಂತ ಬೆಟ್ಟಿಂಗ್ ಕಾರ್ಯಾಚರಣೆಯನ್ನು ವಿಸ್ತರಿಸಲಾಗಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ಸಿಂಡಿಕೇಟ್ ದೇಶದ ವಿವಿಧ ಭಾಗಗಳಲ್ಲಿ ಅಕ್ರಮ ಬೆಟ್ಟಿಂಗ್ ಪ್ಯಾನೆಲ್ಗಳನ್ನು ನಡೆಸುತ್ತಿತ್ತು, ಬಳಕೆದಾರರನ್ನು ನೋಂದಾಯಿಸಿಕೊಳ್ಳುತ್ತಿತ್ತು, ಬೆಟ್ಟಿಂಗ್ ಚಟುವಟಿಕೆಗಳನ್ನು ನಡೆಸುತ್ತಿತ್ತು ಮತ್ತು ಅಪಾರ ಪ್ರಮಾಣದ ಅಕ್ರಮ ಲಾಭ ಗಳಿಸುತ್ತಿತ್ತು ಎಂದು ಸಿಬಿಐ ಆರೋಪಿಸಿದೆ.
ಈ ಅಕ್ರಮ ಹಣವನ್ನು ಹಲವು ನಕಲಿ ಬ್ಯಾಂಕ್ ಖಾತೆಗಳ (ಮ್ಯೂಲ್ ಅಕೌಂಟ್ಗಳು) ಮೂಲಕ ವರ್ಗಾಯಿಸಿ ನಂತರ ವಿದೇಶಗಳಿಗೆ ಕಳುಹಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅಕ್ರಮ ಹಣದ ಒಂದು ಭಾಗವನ್ನು ಸಾರ್ವಜನಿಕ ಅಧಿಕಾರಿಗಳಿಗೆ ರಕ್ಷಣಾ ಹಣವಾಗಿ ನೀಡಲಾಗಿದೆ ಎಂಬ ಆರೋಪವೂ ಇದೆ.
ಸಿಬಿಐ ಪ್ರಕಾರ, ಸಿಂಡಿಕೇಟ್ನ ಪ್ರವರ್ತಕರು ಹಾಗೂ ಹಲವು ಸಹಚರರು ಕೆಲವು ವರ್ಷಗಳ ಹಿಂದೆ ಪಶ್ಚಿಮ ಏಷ್ಯಾದ ದೇಶಗಳಿಗೆ ತೆರಳಿ, ಅಲ್ಲಿಂದಲೇ ಬೆಟ್ಟಿಂಗ್ ಜಾಲವನ್ನು ಮುಂದುವರಿಸುತ್ತಿದ್ದಾರೆ. ವಿದೇಶದಲ್ಲಿರುವ ನಾಲ್ವರು ಪ್ರಮುಖ ಆರೋಪಿಗಳ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ಗಳನ್ನು ಜಾರಿಗೊಳಿಸಲಾಗಿದೆ.
ಅವರನ್ನು ಪರಾರಿಯಾದ ಆರ್ಥಿಕ ಅಪರಾಧಿಗಳೆಂದು ಘೋಷಿಸಲು ಅಗತ್ಯ ಕ್ರಮಗಳನ್ನು ಸಹ ಸಿಬಿಐ ಆರಂಭಿಸಿದೆ.
ಸಿAಡಿಕೇಟ್ನ ಸಂಪೂರ್ಣ ವ್ಯಾಪ್ತಿ, ಅದರಲ್ಲಿರುವ ಸಂಭಾವ್ಯ ರಾಜಕೀಯ ಮತ್ತು ಆಡಳಿತಾತ್ಮಕ ಸಂಪರ್ಕಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಸಿಬಿಐ ತಿಳಿಸಿದೆ. ತನಿಖೆ ಮುಂದುವರಿದAತೆ ಇನ್ನಷ್ಟು ಆರೋಪಪಟ್ಟಿಗಳನ್ನು ಸಲ್ಲಿಸುವ ಸಾಧ್ಯತೆಯಿದೆ.
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ 