ಉದ್ಯಮಿ ಮೇಲೆ ಗ್ರಾನೈಡ್ ಕಲ್ಲು ಬಿದ್ದು ಸಾವು
Businessman dies after falling granite stone
ಕಾರವಾರ 19: ಮಲ್ಲಿಕಾರ್ಜುನ ಟೈಲ್ಸ್ , ಸಿರಾಮಿಕ್ಸ್ ಅಂಗಡಿ ಮಾಲೀಕ, ಉದ್ಯಮಿ ಮುದ್ದಣ್ಣ ಹನುಮಪ್ಪ ಹಾಲುಂಡಿ (49) ಅವರ ಮೇಲೆ ಗ್ರಾನೈಟ್ ಕಲ್ಲು ಬಿದ್ದು ಸಾವನ್ನಪ್ಪಿದ್ದಾರೆ . ಈ ಘಟನೆ ಗುರುವಾರ ಬೆಳಿಗ್ಗೆ ಸದಾಶಿವಗಡದ ಬಿಡ್ತುಲಬಾಗ ಎಂಬಲ್ಲಿ ಮುದ್ದಣ್ಣ ಅವರ ಟೈಲ್ಸ ಶಾಪ್ ನಲ್ಲಿ ನಡೆದಿದೆ.
ಗ್ರಾನೈಟ್ ಕಲ್ಲಿಗೆ ಅವರು ಕೈಕೊಟ್ಟು ನಿಂತಿದ್ದ ವೇಳೆ , ನೆಲ ಒದ್ದೆಯಾಗಿದ್ದ ಕಾರಣ ಕಲ್ಲು ಜಾರಿ ಅವರ ಮುಖ ಭಾಗಕ್ಕೆ ಬಿತ್ತು ಎನ್ನಲಾಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ತರಲಾಯಿತಾದರೂ, ಆ ವೇಳೆಗೆ ಅವರು ಮೃತಪಟ್ಟಿದ್ದನ್ನು ವೈದ್ಯರು ದೃಢಪಡಿಸಿದರು ಎನ್ನಲಾಗಿದೆ.ಕಾರವಾರ ತಾಲೂಕು ಉಪ್ಪಾರ ಸಮುದಾಯದ ಹಿರಿಯ ಮುಖಂಡರು ಹಾಗೂ ಉಪ್ಪಾರ ಸಮಾಜದ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು. ಆಕಸ್ಮಿಕ ಸಾವು ಅವರ ಅಪ್ತರಲ್ಲಿ, ಕುಟುಂಬ ವರ್ಗದವರಲ್ಲಿ ಅತೀವ ದುಃಖ ತಂದಿದೆ. ಮುದ್ದಣ್ಣ ಮೂಲತಃ ಬಾಗಲಕೋಟಿ ಜಿಲ್ಲೆಯ ನಿಲೋಗಲ್ಲ ಗ್ರಾಮದವರು. ಟೈಲ್ಸ ಉದ್ಯಮಿಯಾಗಿ ಅವರು ಕಾರವಾರದಲ್ಲಿ ನೆಲಸಿದ್ದರ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 