ನಿತ್ಯ ಮುಂಜಾನೆಯಿಂದ ಮುಂಡಗೋಡದಿಂದ ಬೆಂಗಳೂರಿಗೆ ಬಸ್ ಸೇವೆ ಪ್ರಾರಂಭ
Bus service from Mundagoda to Bengaluru starts every morning
ಲೋಕದರ್ಶನ ವರದಿ
ಮುಂಡಗೋಡ 31 : ಸದಸ್ಯ ಪ್ರಯಾಣಿಕರ ಸೌಲಭ್ಯವನ್ನು ಗಮದಲ್ಲಿಟ್ಟುಕೊಂಡು ಮುಂಡಗೋಡ- ಬೆಂಗಳೂರು ನಡುವೆ ಕೆಎಸ್ಆರ್ಟಿಸಿ ಬಸ್ ನೂತನ ಬಿಎಸ್-6 ಬಸ್ ಸೇವೆಗೆ ಸೋಮವಾರ ಚಾಲನೆ ನೀಡಲಾಯಿತು. ಗ್ಯಾರಂಟಿಯೋಜನೆಯ ಸದಸ್ಯ ಧರ್ಮರಾಜ ನಡಿಗೇರ ಹಸಿರು ಬಾವುಟ ತೋರಿಸುವ ಮೂಲಕ ಮುಂಡಗೋಡ-ಬೆಂಗಳೂರು ಬಸ್ ಸೇವೆಗೆ. ಚಾಲನೆ ನೀಡುವ ಮೂಲಕ ಬಸ್ ಸೇವೆ ಪ್ರಾರಂಭಗೊಂಡಿತು.
ಈ ಸಂದರ್ಭದಲ್ಲಿ ಗ್ಯಾರಂಟಿಯ ಸದಸ್ಯರಾದ ಶಾರದಾ ರಾಠೋಡ, ಹನಮಂತ ವಡ್ಡರ,ಶೈನಾಜ ಕದಡಿ, ಹನಮಂತ ಗವಾಣಿ, ಮುನಾಫ್ ದುಂಡಶಿ, ಮುಂಡಗೋಡ ಡಿಪೋ ವ್ಯವಸ್ಥಾಪಕ ಕರೀಮ ಕುರ್ತಕೋಟಿ ಚಾಲಕರು ನಿರ್ವಾಹಕರು ಸೇರಿದಂತೆ ಸಾರ್ವಜನಿಕರಾದ ಮಂಜುನಾಥ ವಡ್ಡರ ಅಪ್ಪಣ್ಣ ಕಲಾಲ ಮುಂತಾದವರು ಇದ್ದರು ಪ್ರತಿದಿನ ಮುಂಜಾನೆ 7.45 ಗಂಟೆಗೆ ಮುಂಡಗೋಡದಿಂದ ಹೊರಡುವ ಈ ಬಸ್, ಕೋಣನಕೇರಿ, ಚಂದಾಪುರ, ಬಂಕಾಪುರ ಹಾವೇರಿ, ರಾಣೇಬೆನ್ನೂರ ,ಮರ್ಗವಾಗಿ ಸಂಚರಿಸಿ ಸಾಯಂಕಾಲ 5 ಗಂಟೆಗೆ ಬೆಂಗಳೂರನ್ನು ತಲುಪಲಿದೆ., ಇದೇ ಬಸ್ ಮರು
ದಿನ ಮುಂಜಾನೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು, ಸಾಯಂಕಾಲ 5 ಗಂಟೆಗೆ ಮುಂಡಗೋಡ ಬಸ್ ನಿಲ್ದಾಣಕ್ಕೆ ಆಗಮಿಸಲಿದೆ. ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಈ ನೂತನ ಬಸ್ ಸೇವೆಯನ್ನು ಕಲ್ಪಿಸಿದ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ಶಾಸಕರಾದ ಶಿವರಾಮ ಹೆಬ್ಬಾರ್ ಅಭಿನಂದನೆಗಳನ್ನು ನೀಡಿದ ಸಂದೇಸದಲ್ಲಿ ತಿಳಿಸಿದ್ದಾರೆ. ಇದಲ್ಲದೆ, ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರು ಈ ನೂತನ ಬಸ್ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 