ಯೋಗದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ

ಯೋಗದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ Building a healthy society is possible through yoga

ಶಿಗ್ಗಾವಿ 23  : ಯೋಗದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಯೋಗ ತರಬೇತುದಾರ ಕುಬೇರ​‍್ಪ ಬಂಡಿವಡ್ಡರ ಹೇಳಿದರು.  ಪಟ್ಟಣದ ವಿಠಲ ಹರಿ ಮಂದಿರದಲ್ಲಿ ನಾಮದೇವ ಸಿಂಪಿ ಸಮಾಜ ವತಿಯಿಂದ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಯೋಗದಿಂದ ರೋಗಗಳನ್ನು ದೂರವಿರಿಸಲು ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆಗುವ ಪ್ರಯೋಜನಗಳು, ವಿವಿಧ ಮುದ್ರೆಗಳ ವಿಶೇಷತೆಗಳು ಹಾಗೂ ಅವುಗಳ ಉಪಯೋಗಗಳ ಕುರಿತು ವಿವರವಾಗಿ ತಿಳಿಸಿದರು. ಸಮಾಜದ ಅಧ್ಯಕ್ಷ ಕೇದಾರ​‍್ಪ ಬಗಾಡೆ ಮಾತನಾಡಿ ಇಂದಿನ ಒತ್ತಡದ ಜೀವನಶೈಲಿಯಲ್ಲಿ ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವ ಅತ್ಯುತ್ತಮ ಸಾಧನವಾಗಿದೆ.

ಯೋಗವು ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆಯಾಗಿದ್ದು, ಇದರ ಮಹತ್ವವನ್ನು ಯುವ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಸುರೇಶ್ ಮೂಳೆ , ಸುನಿಲ್ ಮಾಳವಾದೆ, ಮಂಜುನಾಥ ಗಂಜಿಗಟ್ಟಿ, ಕೃಷ್ಣ ಮೂಳೆ, ದಾಮೋದರ ಮಾಳವಾದೆ, ಪ್ರಕಾಶ್ ಆತಡ್ಕರ್, ಪ್ರಕಾಶ್ ಮೀರಜ್ಕರ್, ಅಮಿತ್ ಗಂಜಿಗಟ್ಟಿ, ರೂಪಾ ಬಗಾಡೆ, ಅಶ್ವಿನಿ ಗಂಜಿಗಟ್ಟಿ, ಕಾವ್ಯಾ ಬಗಾಡೆ, ಶ್ರದ್ಧಾ ಗಂಜಿಗಟ್ಟಿ, ರೂಪಾ ಮಾಳವಾದೆ, ಅನುರಾಧಾ ಗಂಜಿಗಟ್ಟಿ, ಮಮತಾ ಮಾಳವಾದೆ, ರೇಣುಕಾ, ಸರೋಜಾ ಗಂಜಿಗಟ್ಟಿ, ನೇತ್ರಾ ಮೂಳೆ ಸೇರಿದಂತೆ ಸಮಾಜದ ಅನೇಕ ಸದಸ್ಯರು ಉಪಸ್ಥಿತರಿದ್ದರು. ಪ್ರಕಾಶ್ ಓಂಧಕರ್ ಕಾರ್ಯಕ್ರಮ ನಿರ್ವಹಿಸಿದರು.