ಚಿಂತನ ಮಥನ ಕಾರ್ಯಕ್ರಮ

 ಚಿಂತನ ಮಥನ ಕಾರ್ಯಕ್ರಮ Brainstorming program

ವಿಜಯಪುರ  10:  ಗ್ರಾಮ ಪಂಚಾಯತ್ ಗಳ ಸಬಲೀಕಣಕ್ಕಾಗಿ ಚಿಂತನ ಮಥನವನ್ನು ಕಾರ್ಯಕ್ರಮವನ್ನು ಗ್ರಾಮ ಸ್ವರಾಜ್ಯ ಕರ್ನಾಟಕ ಆರ್‌.ಡಿ.ಪಿ. ಕುಟುಂಬ ಮತ್ತು ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟ ವಿಜಯಪುರ ಸಂಯುಕ್ತಾಶ್ರಯದಲ್ಲಿ ದಿ. 12 ಬುಧವಾರದಂದು ಬೆಳಿಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ವಿವಿಧ ಗೋಷ್ಠಿಗಳನ್ನು ನಗರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಂ.ಎಚ್‌. ಪಠಾಣ ಜಿಲ್ಲಾ ಅಧ್ಯಕ್ಷ ಗ್ರಾಮ ಪಂಚಾಯತ ಸದಸ್ಯರ ಒಕ್ಕೂಟ ವಿಜಯಪುರ ಹಾಗೂ ಶ್ರೀ ಸಿ.ಜಿ. ಪಾರೆ ಜಿಲ್ಲಾಧ್ಯಕ್ಷರು ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ವಿಜಯಪುರ ತಿಳಿಸಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿದ ಅವರು, ಮೊದಲನೆ ಗೋಷ್ಠಿಯಲ್ಲಿ ಗ್ರಾಮ ಸ್ವಾರಾಜ್ಯ ಪರಿಕಲ್ಪನೆಯಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರ, ಎರಡನೇ ಗೋಷ್ಠಿಯಲ್ಲಿ ಗ್ರಾಮ ಪಂಚಾಯತಿಗಳ ಸಬಲೀಕರಣ ಅಧಿಕಾರಿ ನೌಕರರ ಪಾತ್ರ ಮತ್ತು ಬದಲಾವಣೆಯ ಕ್ರಮಗಳು ಕುರಿತು ಜರುಗಲಿವೆ.