ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ

ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ Bhoomi Puja for road improvement work

 ರಾಯಬಾಗ 20:  ತಾಲೂಕಿನ ಭೆಂಡವಾಡ ಗ್ರಾಮದ ಬಸವಣ್ಣ ದೇವಸ್ಥಾನದಿಂದ ರೇವಣ್ಣಸಿದ್ಧೇಶ್ವರ ಗಿರಿ ವರೆಗೆ ಜಿ.ಪಂ.ಇಲಾಖೆಯಿಂದ ಮಂಜೂರಾದ ರೂ.40 ಲಕ್ಷ ಅನುದಾನದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಡಿ.ಎಮ್‌.ಐಹೊಳೆ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು. ಭೆಂಡವಾಡ ರೇವಣಸಿದ್ದೇಶ್ವರ ಮಠದ ಗುರುಸಿದ್ಧ ಸ್ವಾಮಿಜೀ, ಸುರೇಶ್ ಚೌಗಲಾ, ಅಪ್ಪು ಬಾನೆ, ಮಹಾದೇವ ಲಕ್ಷ್ಮೇಶ್ವರ,  ಸಂಗಪ್ಪ ಬೆನ್ನಾಳೆ, ರವಿ ಪುಜೇರಿ, ಸಂಗಪ್ಪ ಪುಜೇರಿ, ಪವಾಡಿ ಮಂಟೂರ, ಸಿದ್ದು ಪಾತ್ರೋಟ, ಕುಮಾರ ಸಾರಾಪುರೆ ಇದ್ದರು.