20ಕ್ಕೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
Best Teacher Award presented to 20
20ಕ್ಕೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಹೂವಿನ ಹಡಗಲಿ 14: ಪಟ್ಟಣದ ಸರ್ಕಾರಿನೌಕರರ ಭವನದಲ್ಲಿ 2025 ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭಆಯೋಜನೆ ಕುರಿತು ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಪೂರ್ವಭಾವಿ ಸಭೆ ಜರುಗಿತು.ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಅಧ್ಯಕ್ಷ ಸುರೇಶ ಅಂಗಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೆ.20 ರಂದು ಪ್ರಸಕ್ತ ಸಾಲಿನ ಡಾಽರಾಧಾಕೃಷ್ಣನ್ ನೆನಪಿನಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭನಿರ್ಧರಿಸಲಾಯಿತು. ನಡೆಸಲುಬೀಚಿ ಬಳಗದ ಹಿರಿಯ ಸದಸ್ಯರಾದ ಬೀರಬ್ಬಿ ಬಸವರಾಜ ಸದಸ್ಯತ್ವ ಅಭಿಯಾನ ಕಾಠ್ಯಕ್ರಮ ಮುಂದುವರೆಸಲು ಅಭಿ ಪ್ರಾಯ ವ್ಯಕ್ತಪಡಿಸಿದರು. ವರ್ಷಪೂರ್ತಿ ವಿಭಿನ್ನ ಕಾಠ್ಯಕ್ರಮಗಳನ್ನು ಆಯೋಜಿಸುವಕುರಿತು ಆದ್ಯತೆ ನೀಡಬೇಕು ಎಂದರು.ಬಳಗದ ಮಾಜಿ ಅಧ್ಯಕ್ಷ ಎಲ್ ಖಾದರಭಾಷಾ ಬಳಗದ ಬೈಲಾ ಕುರಿತು ಮಾಹಿತಿ ನೀಡಿದರು. ಕನಿಷ್ಟ 5 ಸಾವಿರ, ಅದಕ್ಕೂ ಹೆಚ್ಚು ಹಣ ದತ್ತಿ ನೀಡುವ ದಾನಿಗಳನ್ನು ವನಿಗಳನ್ನು ಸಂಪರ್ಕಿಸಿ ಸ್ಥಿರ ಠೇವಣಿ ಬ್ಯಾಂಕ್ ನಲ್ಲಿ ತೆರೆಯಲು ಸಭೆ ಒಪ್ಪಿಗೆ ಸೂಚಿಸಿತು.?. ಸಭೆಯಲ್ಲಿ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗಕ್ಕೆ ನೂತನ ಕೋಶಾಧ್ಯ ಕ್ಷರಾಗಿ ಗ್ರಂಥಾಲಯಾಧಿಕಾರಿ ನಾರಾಯಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಬೋವಿ ಹುಲುಗಪ್ಪ ಸಂಘಟನಾ ಕಾವ್ಯದರ್ಶಿ ಬಿಚ್ಚುಗತ್ತಿ ಖಾಜಾ ಹುಸೇನ್, ಶಿಕ್ಷಕರಾದ ಚಿಂತಿ ವಿಶ್ವನಾಥ್, ಎಂ.ಸಿದ್ದೇಶ್ ಮತ್ತಿತರರು ಇದ್ದರು. ಬಳಗದ ಗೌರವ ಕಾಯದರ್ಶಿ ನಾಗರಾಜ್ ಮಲ್ಟಿ ಒಡೆಯರ್ ಸ್ವಾಗತಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 