ಲಲಿತ ಪ್ರಬಂಧಗಳು ಅನುಭವಗಳನ್ನು ಜೀವಂತವಾಗಿಡುತ್ತವೆ : ಶಶಿಧರ ಹೊಸಕೋಟೆ

ಲಲಿತ ಪ್ರಬಂಧಗಳು ಅನುಭವಗಳನ್ನು ಜೀವಂತವಾಗಿಡುತ್ತವೆ : ಶಶಿಧರ ಹೊಸಕೋಟೆ Beautiful essays keep experiences alive: Shashidhar Hosakote

ಲೋಕದರ್ಶನ ವರದಿ 

ಬೆಳಗಾವಿ 15 : ಲಲಿತ ಪ್ರಬಂಧಗಳು ನಮ್ಮನ್ನು ನಾವು ಕಂಡುಕೊಳ್ಳುವ ಕನ್ನಡಿಗಳಿದ್ದಂತೆ. ಲಲಿತ ಪ್ರಬಂಧಗಳು ಅನುಭವಗಳನ್ನು ಜೀವಂತವಾಗಿಡುತ್ತವೆ ಎಂದು ಖ್ಯಾತ ವಾಗ್ಮಿ ಶಶಿಧರ ಹೊಸಕೋಟಿ ಇಂದಿಲ್ಲಿ ಹೇಳಿದರು. 

ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 13 ಶನಿವಾರದಂದು ಸಾಯಂಕಾಲ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ‘ಲಲಿತ ಲಹರಿ’ ಲಲಿತ ಪ್ರಬಂಧಗಳ ವಾಚನ ಮತ್ತು ರಸವಿಮರ್ಶೆ ಕಾರ್ಯಕ್ರಮವನ್ನಿಟ್ಟುಕೊಂಡಿದ್ದರು. ಪ್ರಬಂಧಗಳ ಕುರಿತು ಮಾತನಾಡುತ್ತ ಶಶಿಧರ ಹೊಸಕೋಟೆ ಮೇಲಿನಂತೆ ಅಭಿಪ್ರಾಯ ಪಟ್ಟರು. 

ಮುಂದೆ ಮಾತನಾಡುತ್ತ ಹೊಸಕೋಟೆಯವರು ಲಲಿತ ಪ್ರಬಂಧ ಸಾಹಿತ್ಯಕ್ಕೆ ಪುಸ್ತಕೋದ್ಯಮದ ಬೆಂಬಲವಿಲ್ಲ. ಪತ್ರಿಕೋದ್ಯಮ ಬೆಂಬಲವಿದೆ. ದೀಪಾವಳಿ ವಿಶೇಷಾಂಕ, ವಾರಪತ್ರಿಕೆಗಳು ಪ್ರಕಟಿಸಿ ಪ್ರಬಂಧಗಳನ್ನು ಎತ್ತಿ ಹಿಡಿದಿವೆ.