ಬಸವರಾಜ ಕುಮಟಗಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ

ಬಸವರಾಜ ಕುಮಟಗಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ Basavaraja Kumatagi Commemorative Charity Lecture Programme

  ತಾಳಿಕೋಟಿ 07: ತಾಲೂಕ ಶರಣ ಸಾಹಿತ್ಯ ಪರಿಷತ್ ವತಿಯಿಂದ ದಿ. ಬಸವರಾಜ ಕುಮಟಗಿ ಇವರ ಸ್ಮರಣಾರ್ಥ ಮಾತೋಶ್ರೀ ಕಮಲಾಬಾಯಿ ಸಿದ್ದಪ್ಪ ಕರ್ಜಗಿ ಕಾನೂನು ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ್ ಹಿಪ್ಪರಗಿ "ವಚನಗಳಲ್ಲಿ ಕಾಯಕ ಮತ್ತು ದಾಸೋಹದ" ವಿಷಯದ ಮೇಲೆ ಉಪನ್ಯಾಸವನ್ನು ನೀಡಿದರು. ವೇದಿಕೆಯಲ್ಲಿ ದತ್ತಿ ದಾನಿಗಳಾದ ಶ್ರೀಮತಿ ಸುನಂದ ಪ್ರಭುಲಿಂಗ ಕುಮಟಗಿ,ಡಾ.ಎಚ್‌.ಬಿ.ನಡುವಿನಕೇರಿ,ಕಾನೂನು ಕಾಲೇಜ್ ಸಂಸ್ಥಾಪಕ ಪ್ರೊ. ಎಂ. ಎಸ್‌.ಕರ್ಜಗಿ,ಕಾರ್ಯಕ್ರಮದಲ್ಲಿ ತಾಲೂಕು ಶರಣ ಸಾಹಿತ್ಯ ಬಳಗದ ಯುವ ಘಟಕದ ಅಧ್ಯಕ್ಷ ಜಗದೀಶ ಬಿಳೇಭಾವಿ,ಈರಣ್ಣ ಕಲಬುರ್ಗಿ,ಶಿವಲಿಂಗಪ್ಪ ಪಾಲ್ಕಿ , ಬೀಮಣ್ಣ ಸುಳಿಭಾವಿ,ಶರಣ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾಶಿನಾಥ್ ಸಜ್ಜನ ಸ್ವಾಗತಿಸಿದರು. ಮಹಾಂತೇಶ್ ಮುರಾಳ ವಂದಿಸಿದರು.ಗ್ಲೋರಿಯಾ ಕ್ರಿಸ್ ನಿರೂಪಿಸಿದರು.