ವೃದ್ಧಾಶ್ರಮದಲ್ಲಿ ಅಥಪೂಣವಾಗಿ ಬಸವರಾಜ ಕಲ್ಲಟ್ಟಿ ಜನ್ಮದಿನ ಆಚರಣೆ

   ವೃದ್ಧಾಶ್ರಮದಲ್ಲಿ ಅಥಪೂಣವಾಗಿ ಬಸವರಾಜ ಕಲ್ಲಟ್ಟಿ ಜನ್ಮದಿನ ಆಚರಣೆ Basavaraja Kallatti's birthday celebrated meaningfully at an old age home

ಯಮಕನಮರಡಿ 01 : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೋಗಿನಹಾಳ ಗ್ರಾಮದ ಸಮಾಜ ಸೇವಕರು ಹಾಗೂ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ರೀ ಬಸವರಾಜ ಶಂಕರ ಕಲ್ಲಟ್ಟಿ ಇವರ ೫೬ ನೇ ವರ್ಷದ ಹುಟ್ಟು ಹಬ್ಬವನ್ನು ಹಿಡಕಲ್ ಡ್ಯಾಂನ ಮಹಿಳಾ ಕಲ್ಯಾಣ ಸಂಸ್ಥೆಯ “ಆಸರೆ” ವೃದ್ಧಾಶ್ರಮದಲ್ಲಿ ಹಾಗೂ ದೂದನಾನಾ ಬುದ್ದಿಮಾಂದ್ಯ ಮಕ್ಕಳ ಶಾಲೆಯ್ಲಿ ಅಲ್ಪೋಪಹಾರ ಹಾಗೂ ಹಣ್ಣು ಹಂಪಲಗಳನ್ನು ವಿತರಿಸುವ ಮೂಲಕಸಹಜವಾಗಿ ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಹುಕ್ಕೇರಿ,ಸುಲ್ತಾನಪೂರ, ಹಿಡಕಲ್ ಡ್ಯಾಂ,ಹೊಸಪೇಟ, ಸಿಂದಿಹಟ್ಟಿ, ಹಟ್ಟಿ ಆಲೂರ, ಲೇಬರ್ ಕ್ಯಾಂಪ, ನಿರ್ವಾನಟ್ಟಿ ಗ್ರಾಮಗಳ ಅಭಿಮಾನಿ ಬಳಗ ಹಾಗೂ ನೊಗಿನಹಾಳ ಗ್ರಾಮದ ಯುವ ಮುಖಂಡರು ಶುಭಕೋರಿದರು. ಕಾರ್ಯಕ್ರಮದಲ್ಲಿ ಶಕ್ತಿ ಸದನ ಕೇಂದ್ರದ ದ್ರಾಕ್ಷಾಯಿನಿ ಮಠಪತಿ ರಾಜು ಗಲಾಟಿ,  ಗಣೇಶ ಚಿಂಚಿ, ದುಂಡಪ್ಪಾ ಗಲಾಟೆ,  ಗಣೇಶ ಬೆಳಗಾವಿ, ಕೆಂಪಣ್ಣಾ ನೇಸರಗಿ,  ಅಕ್ಷಯ ಗಲಾಟಿ,  ದಸ್ತಗೀರ ಮಕಾಂದಾರ, ಕುಮಾರ ಜೋಡಟ್ಟಿ, ಪ್ರವೀಣ ಬಾರಿಗಿಡದ  ಉಪಸ್ಥಿತರಿದ್ದರು