ಬಸವರಾಜ ಆರಿಬೆಂಚಿ ನಿಧನ

ಬಸವರಾಜ ಆರಿಬೆಂಚಿ ನಿಧನ  Basavaraja Aribenchi passes away

ಯರಗಟ್ಟಿ 22: ಸಮೀಪದ ಸೊಪ್ಪಡ್ಲ ಗ್ರಾಮದ ನಿವಾಸಿ, ಕಾಂಗ್ರೆಸ್ ಮುಖಂಡರು, ಯರಗಟ್ಟಿ ಎಪಿಎಂಸಿ ಉಪಾಧ್ಯಕ್ಷ ಬಸವರಾಜ ಸಣ್ಣತಮ್ಮಪ್ಪಆರಿಬೆಂಚಿ(53)ಇವರು ಶುಕ್ರವಾರ ಹೃದಯಾಘಾತದಿಂದ ದೈವಾಧೀನರಾದರು. 

ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸವದತ್ತಿ ಶಾಸಕ ವಿಶ್ವಾಸ ವೈದ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಪತ್ನಿ, ಇಬ್ಬರು ಪುತ್ರ, ಸಹೊದರರು, ಸಹೋದರಿ ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ.