ರಾಜ್ಯಸಭೆಗೆ ಮೋಹನ ಕಾತರಕಿ ಆಯ್ಕೆ ಮಾಡಿಲು ಬಾಳು ತೇರದಾಳ ಒತ್ತಾಯ

ರಾಜ್ಯಸಭೆಗೆ ಮೋಹನ ಕಾತರಕಿ ಆಯ್ಕೆ ಮಾಡಿಲು ಬಾಳು ತೇರದಾಳ ಒತ್ತಾಯ Balu Teradala demands Mohan Kataraki be elected to Rajya Sabha

ಪಾಲಬಾವಿ 16 :  ರಾಜ್ಯದ ನೆಲ, ಜಲ, ಭಾಷೆ ರಕ್ಷಣೆಗೆ ಅವಿರತವಾಗಿ ಶ್ರಮಿಸುತ್ತಿರುವ ಸುಪ್ರೀಂ ಕೋರ್ಟಿನ ಖ್ಯಾತ ವಕೀಲರು ಮೋಹನ ಕಾತರಕಿ ಅವರನ್ನು ರಾಜ್ಯಸಭೆಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆ ಮಾಡಲು ಕುರುಬ ಸಮುದಾಯದ ಮುಖಂಡ ಬಾಳು ತೇರದಾಳ  ಒತ್ತಾಯಿಸಿದ್ದಾರೆ.  ಕೃಷ್ಣಾ, ಕಾವೇರಿ, ಮಹದಾಯಿ ಜಲ ವಿವಾದಗಳಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಮೋಹನ ಕಾತರಕಿ ಸಾಕಷ್ಟು ಶ್ರಮಿಸಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದಲ್ಲೂ ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶನ ಮಾಡುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ವಾದ ಮಂಡನೆ ಮಾಡಿದ ಹಿರಿಯ ವಕೀಲರು ಹೀಗಾಗಿ ಅವರ ಸೇವೆಯನ್ನು ಗುರುತಿಸಿ, ಮೋಹನ್ ಕಾತರಕಿ ಅವರು ರಾಜ್ಯಕ್ಕೆ ಅಗತ್ಯವಾಗಿದೆ. ಮಾನ್ಯ ಕೆಪಿಸಿಸಿ ಅಧ್ಯಕ್ಷರು ಡಿ.ಕೆ.ಶಿವಕುಮಾರ ಸಾಹೇಬರು ಅವರನ್ನು ಕುರುಬ ಸಮುದಾಯದ ಮುಂಖಂಡ ಬಾಳು ತೇರದಾಳ  ಒತ್ತಾಯಿಸಿದ್ದಾರೆ.