ಮಹಾಲಕ್ಷ್ಮೀ ಜಾತ್ರೆಯಲ್ಲಿ ಸತ್ಯವಾನ ಸಾವಿತ್ರಿ ಬೈಲಾಟ ಪ್ರದರ್ಶನ
Bailata performance by Satyavana Savitri at Mahalakshmi Fair
ಗೋಕಾಕ 07: ಪ್ರಸಕ್ತ 2025 ರ ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವದಲ್ಲಿ ಗೋಕಾಕ ಜಾನಪದ ರಂಗಭೂಮಿ ಕಲಾವಿದ ಈಶ್ವರಚಂದ್ರ ಶಿವಪುತ್ರ್ಪ ಬೆಟಗೇರಿ ಅವರ ನಿರ್ದೇಶನದಲ್ಲಿ ಶ್ರೀ ಲಕ್ಷ್ಮೀದೇವಿ ಸಣ್ಣಾಟ ಸಂಘ, ಅಂಬಿಗೇರ ಗಲ್ಲಿ ಗೋಕಾಕ ಇವರು ‘ಸತ್ಯವಾನ ಸಾವಿತ್ರಿ’ ಬೈಲಾಟ ಪ್ರದರ್ಶಿಸಲಾಯಿತು.
ಅಶ್ವಪತಿ ಮಹಾರಾಜನಾಗಿ ಕಲಾ ತಂಡದ ಮುಖ್ಯಸ್ಥ ಅವರಗೋಳದ ಲಕ್ಷ್ಮಣ ಕಾಡಪ್ಪ ಪೂಜೇರಿ, ನಾರದ ಹಾಗೂ ಮಹಾರಾಣಿ ಮಾಲ್ವಿದೇವಿಯಾಗಿ ಮೆಳವಂಕಿಯ ಲಕ್ಕಪ್ಪ ಯಮನಪ್ಪ ಪೂಜೇರಿ, ಯಮಧರ್ಮನಾಗಿ ಶಿಂಗಳಾಪುರದ ಸುರೇಶ ಕಲ್ಲಪ್ಪ ಹರಗೋಲಿ, ದುಮ್ಮತ್ಸೇನ ಮಹಾರಾಜನಾಗಿ ನಾಮದೇವ ಹರಿಜನ, ಬ್ರಹ್ಮದೇವ ಹಾಗು ಸತ್ಯವಾನನಾಗಿ ತುಕಾರಾಮ ಮುತ್ನಾಳ, ಶ್ರೀದೇವಿ ಮತ್ತು ಸಾವಿತ್ರಿ ಪಾತ್ರದಲ್ಲಿ ಗೋಕಾಕದ ಸಾಹಿತಿ ಈಶ್ವರಚಂದ್ರ ಬೆಟಗೇರಿ ಅಭಿನಯಿಸಿದರು.
ಹಿನ್ನೆಲೆ ಸಂಗೀತದಲ್ಲಿ ಹಾರ್ಮೋನಿಯಂ ವಾದಕರಾಗಿ ಶಿವಾನಂದ ದುಂಡಪ್ಪ ಗುರವ ಹಾಗ ದುರದುಂಡಿ ಗ್ರಾಮದ ಬಸವರಾಜ ಕಲ್ಲಪ್ಪ ಬಡಿಗೇರ, ತಬಲಾ ವಾದಕರಾಗಿ ಉದಗಟ್ಟಿಯ ಭೀಮಶೆಪ್ಪ ಲಕ್ಷ್ಮಣ ಹುಲೆಣ್ಣವರ, ತಾಳವಾದನದಲ್ಲಿ ಶಿರಹಟ್ಟಿ ಗ್ರಾಮದ ಮಲ್ಲಪ್ಪ ದುಂಡಪ್ಪ ಡಂಗ, ಶ್ರೀಕಾಂತ ವಿಠ್ಠಲಪ್ಪ ಅಂಬಿ, ಮಹಾಂತೇಶ ಮಠಪತಿ, ತಿಪ್ಪಯ್ಯ ಗುರುಲಿಂಗಯ್ಯ ಮಠಪತಿ ಸಾಥ್ ನೀಡಿದರು.
ಭಾಗವತರಾಗಿ ಈಶ್ವರ ಅರ್ಜುನಪ್ಪ ಗಡಕರಿ, ಪ್ರಭಾ ಶುಗರ್ದ ಇಸಾಮುದ್ದೀಮ ದೇಸಾಯಿ, ಅಡಿಬಟ್ಟಿಯ ಕಲ್ಲಯ್ಯ ಮಠಪತಿ, ಮಹಾದೇವ ಹತಪಾಕಿ ಮುಂತಾದವರು ಸಹಕರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 