ಇಂದು ಕೆ.ಎಲ್‌.ಇ ಕಾಲೇಜಿನಲ್ಲಿ ಬಹುರೂಪಿ ಡಾ.ಎಸ್‌.ಎಲ್‌. ಬೈರ​‍್ಪ ಕಾರ‌್ಯಕ್ರಮ

ಇಂದು ಕೆ.ಎಲ್‌.ಇ  ಕಾಲೇಜಿನಲ್ಲಿ ಬಹುರೂಪಿ ಡಾ.ಎಸ್‌.ಎಲ್‌. ಬೈರ​‍್ಪ ಕಾರ‌್ಯಕ್ರಮ Bahurupi Dr. S.L. Byrpa program at KLE College today

            ಗದಗ 14: ನಗರದ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗವು ಇತ್ತೀಚಿಗೆ ನಮ್ಮನ್ನಗಲಿದ ಹಿರಿಯ ಸಾಹಿತಿ ಕನ್ನಡ ಕಾದಂಬರಿಗಳ ಮಹರ್ಷಿ  ಡಾ. ಎಸ್‌. ಎಲ್‌. ಬೈರ​‍್ಪನವರ ಕುರಿತಾದ ‘ಬಹುರೂಪಿ ಡಾ. ಎಸ್‌. ಎಲ್‌. ಬೈರ​‍್ಪ’ ಕಾರ‌್ಯಕ್ರಮವನ್ನು ಇಂದು (15-11-2025) ಮುಂಜಾನೆ 09.00 ಘಂಟೆಗೆ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ನಿರ್ಮಿಸಿರುವ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ನಿರ್ದೇಶಿಸಿರುವ  ‘ಡಾ. ಎಸ್‌. ಎಲ್ ಬೈರ​‍್ಪನವರ ಜೀವನ ಮತ್ತು ಕೃತಿಗಳು’ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಗುವುದು. 

           ಹಿರಿಯ ನ್ಯಾಯವಾದಿಗಳಾದ   ಸುಧೀಂದ್ರಸಿಂಹ ಘೋರೆ​‍್ಡಯವರು ‘ಡಾ. ಎಸ್‌. ಎಲ್ ಬೈರ​‍್ಪನವರ ಬದುಕು ಬರಹ’ ವಿಶೇಷ ಉಪನ್ಯಾಸ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನೆಡಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎ. ಕೆ. ಮಠ ವಹಿಸುವರು ಆಸಕ್ತರು ಭಾಗವಹಿಸಲು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಅಂದಯ್ಯ ಅರವಟಗಿಮಠ ಕೋರಿಕೊಂಡಿದ್ದಾರೆ.