ಬಾಗಲಕೋಟ: 15ರಂದು ವಿಕ್ರಮ ಪ್ರತಿಷ್ಠಾನದ ದಶಮಾನೋತ್ಸವ
ಲೋಕದರ್ಶನ ವರದಿ
ಬಾಗಲಕೋಟ 13: ನಗರದ ವಿಕ್ರಮ ಪೈಲ ಪ್ರತಿಷ್ಠಾನದ ದಶಮಾನೋತ್ಸವ ನಿಮಿತ್ತ ಜೂ.15ರಂದು ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಕೃತಿ ಬಿಡುಗಡೆ ಸಮಾರಂಭ ಜರುಗಲಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಡಿ.ಎಂ. ಪೈಲ ಹೇಳಿದರು.
ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು ಸಾನ್ನಿಧ್ಯ, ಡಿ.ಎಂ. ಪೈಲ ಅಧ್ಯಕ್ಷತೆ ವಹಿಸುವರು. ಸಂಸದ ಪಿ.ಸಿ. ಗದ್ದಿಗೌಡರ ಅವರು, ಸಾಹಿತಿ ಚಂದ್ರಕಾಂತ ತಾಳಿಕೋಟಿ ಅವರ ಕಪ್ಪು ಡೈರಿ (ಪತ್ತೆದಾರಿ ಕಾದಂಬರಿ) ಬಿಡುಗಡೆಗೊಳಿಸುವರು. ಸಾಹಿತಿ ಬಿ.ಪಿ. ಹಿರೇಸೋಮಣ್ಣವರ ಅವಲೋಕನ ಮಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಂಗಪ್ಪ ಆಲೂರ, ಆರ್.ಎಂ. ಪಾಟೀಲ, ನಾಮದೇವ ತುಳಸಿಗೇರಿ, ಶ್ರೀಕಾಂತ ಗೌಡರ ಅವರಿಗೆ ತತ್ವಜ್ಞಾನಿ ಮಹಾಯೋಗಿ ವೇಮನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ತಾಲೂಕಿನ ದೀಪಿಕಾ ಹೊಸಮನಿ, ಸ್ವಾತಿ ಪತ್ತಾರ, ವಿಜಯಲಕ್ಷ್ಮೀ ಕವಿಶೆಟ್ಟಿ, ಇಂದಿರಾ ಸೂಳಿಕೇರಿ, ಪ್ರತಿಭಾ ಗದ್ದನಕೇರಿ, ಪಿಯುಸಿ ವಿಭಾಗದ ಶಂಕ್ರವ್ವ ಗೌಡರ, ಗಿರೀಶ ಮ್ಯಾಗೇರಿ, ದೀಪಾ ಪರಣ್ಣವರ, ಪೂಜಾ ಹನುಮಸಾಗರ, ಪ್ರಮೋದ ಮುಂಡರಗಿ, ಮಹೇಶ ಲಮಾಣಿ ಅವರಿಗೆ ಪುರಸ್ಕಾರ ನಡೆಯಲಿದೆ ಎಂದು ಹೇಳಿದರು.
ವಿಜಯಕುಮಾರ ದೇಸಾಯಿ, ಎಸ್.ಕೆ. ಪಾಟೀಲ, ಚಂದ್ರಕಾಂತ ತಾಳಿಕೋಟಿ, ಸಿ.ವಿ. ಚನ್ನವೀರಗೌಡರ, ಬಿ.ಜಿ. ಸಂಗನಗೌಡ, ವಿಜಯರಾವ್ ಕುಲಕರ್ಣಿ ರವಿ ಯಡ್ರಾಮಿ, ರಾಘು ರಾವಳ, ವಿಜಯ ಪೈಲ, ಅಶೋಕ ಭಾವಿ, ಬಸವರಾಜ ಕರಡಿ ಇತರರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 